ಹಾಸನ: ಬಿಜೆಪಿಯಿಂದ ಶಿವರಾಂ ಹೆಬ್ಬಾರ್ ಮತ್ತು ಎಸ್.ಟಿ ಸೋಮಶೇಖರ್ ಉಚ್ಚಾಟನೆ ವಿಚಾರವಾಗಿ ಸಕಲೇಶಪುರದಲ್ಲಿ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿಕೆ ನೀಡಿದ್ದಾರೆ. ಕೇಂದ್ರದ ನಾಯಕರು ಏನು ಕ್ರಮ ತೆಗೆದುಕೊಳ್ಳುತಾರೋ ಅದಕ್ಕೆ ನಮ್ಮ ಸಹಮತವಿದೆ.
ಪಕ್ಷಕ್ಕೆ ಯಾರು ದ್ರೋಹ ಬಗೆಯುತ್ತಾರೋ ಅವರ ವಿರುದ್ಧ ಕೇಂದ್ರ ನಾಯಕರು ಕ್ರಮ ಕೈಗೊಂಡಿದ್ದಾರೆ. ಅದಕ್ಕೆ ಪೂರ್ತಿಯಾಗಿ ನಾನು ಬೆಂಬಲವನ್ನ ಕೊಡುತ್ತೇನೆ. ಅವರ ನಡವಳಿಕೆಯಿಂದ ಪಕ್ಷಕ್ಕೆ ಮುಜುಗರ ಆಗುತ್ತಿತ್ತು ಆದ್ದರಿಂದಲೇ ಕೇಂದ್ರ ನಾಯಕರು ಕ್ರಮ ಕೈಗೊಂಡಿದ್ದಾರೆ ಎಂದ ಆರ್ ̤ಅಶೋಕ್ ತಿಳಿಸಿದ್ದಾರೆ.