ಮಹಾಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿಶ್ವ ಮುಟ್ಟಿನ ನೈರ್ಮಲ್ಯತೆಯ ದಿನಾಚರಣೆ ನಡೆಯಿತು. ಬೆಂಗಳೂರಿನ ಕೆಂಗುಂಟೆ ಆಟದ ಮೈದಾನದಲ್ಲಿ ಭಾನುವಾರ ಬೆಳಕ್ಕೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಜಾಗೃತ ನಡಿಗೆಯನ್ನು ಹಮ್ಮಿಕೊಳ್ಳಲಾಗಿತ್ತು.
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷ್ಮೀ ಚೌಧರಿ ಕಾರ್ಯಕ್ರಮದಲ್ಲಿ ಹಾಜರಾಗಿ ಮಾತನಾಡಿದರು. ಕಾರ್ಯಕ್ರಮವನ್ನು ಕೆಪಿಸಿಸಿ ವಕ್ತಾರೆ ಕುಸುಮ ಹನುಮಂತರಾಯಪ್ಪ ಉದ್ಘಾಟಿಸಿದರು. ಮಹಾಲಕ್ಷ್ಮೀ ಚಾರಿಟೇಬಲ್ ನ ಸಂಸ್ಥಾಪಕರಾದ ಡಿ.ಹೇಮಲತಾ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಕಾರ್ಗಿಲ್ ಕ್ಯಾಪ್ಟನ್ ಎಸ್.ಸಿ. ಭಂಡಾರಿ, ಲೋಕಾಯುಕ್ತ ಎಸ್ಪಿ ನಾಗಭೂಷಣ್, ಕೆಂಗೇರಿ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಬಸವರಾಜ್ ವಿ.ತೇಲಿ, ಖಜಾನೆ ಇಲಾಖೆಯ ಉಪನಿರ್ದೇಶಕರಾದ ಆಶಾ ಪ್ರಮೋದ್ ಸೇರಿದಂತೆ ಹಲವರಿದ್ದರು.