ಬೆಂಗಳೂರು: ರಾಜ್ಯ ಸರ್ಕಾರ ಜಾತಿ ಗಣತಿ ಮರು ಸಮೀಕ್ಷೆಗೆ ಮುಂದಾಗಿರುವುದನ್ನು ರಾಜ್ಯ ಒಕ್ಕಲಿಗರ ಸಂಘ ಸ್ವಾಗತಿ ಮಾಡಿದೆ.
ಸುದ್ದಿಗೋಷ್ಠಿ ನಡೆಸಿ ಸ್ವಾಗತ ಮಾಡಿದೆ. ಈ ವಿಷಯವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪ ಗೌಡ, ರಾಜ್ಯ ಸರ್ಕಾರ ಜಾತಿ ಗಣತಿ ಮರು ಸಮೀಕ್ಷೆಗೆ ಮುಂದಾಗಿರುವುದನ್ನು ಒಕ್ಕಲಿಗರ ಸಂಘ ಸ್ವಾಗತ ಮಾಡಿದೆ. ಈ ಹಿಂದೆ ಕಾಂತರಾಜ್ ಆಯೋಗ ನಡೆಸಿದ್ದ ವರದಿ ವೈಜ್ಞಾನಿಕವಾಗಿಲ್ಲ ಹಾಗೂ ಸಮೀಕ್ಷೆ ನಡೆಸಿ 10 ವರ್ಷಗಳು ಕಳೆದಿವೆ.
ಹೀಗಾಗಿ ಅದನ್ನು ಮಾನ್ಯ ಮಾಡಬಾರದು ಎಂದು ಎಚ್ಚರಿಸಲಾಗತ್ತು. ಒಂದು ವೇಳೆ ಕಾಂತರಾಜ್ ವರದಿ ಜಾರಿಯಾಗಿದ್ದರೆ ರಸ್ತೆಗಿಳಿದು ಉಗ್ರ ಹೋರಾಟದ ಎಚ್ಚರಿಕೆ ನೀಡಲಾಗಿತ್ತು. ಈ ಬಗ್ಗೆ ಸಿಎಂ ಹಾಗೂ ಡಿಸಿಎಂಗೆ ಮನವಿ ಮಾಡಲಾಗಿತ್ತು. ಇದರ ಬೆನ್ನಲ್ಲೇ ಮನವಿಯನ್ನು ಪುರಸ್ಕರಿಸಿ ಜತಿಗಣತಿ ಮರು ಸಮೀಕ್ಷೆಗೆ ಆದೇಶ ನೀಡಿದ್ದಕ್ಕಾಗಿ ಒಕ್ಕಲಿಗರ ಸಂಘ ಸ್ವಾಗತಿಸುತ್ತಿದೆ ಎಂದಿದ್ದಾರೆ.
ಮತ್ತೊಮ್ಮೆ ಹೊಸದಾಗಿ ಜಾತಿ ಜನಗಣತಿ ಸಮೀಕ್ಷೆ ಮಾಡಬೇಕು. ಆದರೆ, ಹಿಂದೆ ಆಗಿರುವ ತಪ್ಪು ಮತ್ತೆ ಮರುಕಳಿಸಬಾರದು. ಸಮೀಕ್ಷೆ ಮಾಡಲು ಹೊರಟಾಗ ಅವರಿಗೆ ಸಾಥ್ ನೀಡಬೇಕು. ಸಮುದಾಯದ ಮುಖಂಡರನ್ನು ಸ್ವಯಂಸೇವಕರಾಗಿ ನಿಲ್ಲಿಸಿ ಸಮೀಕ್ಷೆ ಮಾಡಲು ಅನುಕೂಲ ಮಾಡಿಕೊಡುತ್ತೇವೆ. ಅದೇ ರೀತಿಯಾಗಿ ಬೇರೆ ಸಮುದಾಯಗಳು ಸರ್ಕಾರಕ್ಕೆ ಸಹಕಾರ ಕೊಡಬೇಕು. ಕೇಂದ್ರ ಸರ್ಕಾರ ಜಾತಿ ಜನಗಣತಿ ನಾವೇ ಮಾಡುತ್ತೇವೆ ಎಂದಿದ್ದಾರೆ.
ಅದು ಕೇಂದ್ರ ಸರ್ಕಾರದ ಕೆಲಸ.ಅವರು ಮಾಡಿದ್ರೆ ಮಾತ್ರ ಸರಿಯಾದ ನಿಟ್ಟಿನಲ್ಲಿ ಮಾಡುತ್ತಾರೆ. ಆದರೆ ಕೆಲವು ಸಮುದಾಯದ ನಾಯಕರು ನಾವೇ ಜಾತಿ ಗಣತಿ ಮಾಡುತ್ತೇವೆ ಎನ್ನುತ್ತಿದ್ದಾರೆ. ಅದರಲ್ಲಿ ಏನೂ ತಪ್ಪಿಲ್ಲ. ನೀವು ನಿಮ್ಮ ಜಾತಿ ಜನಗಣತಿ ಮಾಡಿ ಸರ್ಕಾರಕ್ಕೆ ಕೊಡಿ. ಸರ್ಕಾರ ಈಗ ತೆಗೆದುಕೊಂಡಿರುವ ನಿರ್ಧಾರ ಸರಿಯಾಗಿದೆ. 3 ತಿಂಗಳೊಳಗೆ ಜಾತಿಗಣತಿ ಮಾಡಿ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಅಷ್ಟು ಬೇಗ ಜಾತಿ ಗಣತಿ ಮಾಡಲು ಸಾಧ್ಯವಿಲ್ಲ. ನಿಧಾನವಾಗಿಯಾದರೂ ಸರಿಯಾದ ನಿಟ್ಟಿನಲ್ಲಿ ಜಾತಿಜನಗಣತಿ ಆಗಲಿ ಎಂದಿದ್ದಾರೆ.