ಕೊಪ್ಪಳ: ಕೆರೆಯಿಂದ ಮಣ್ಣು ಸಾಗಾಣಿಕೆಗೆ ಅನುಮತಿ ನೀಡಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವಿರುದ್ಧ ಗ್ರಾಮಸ್ಥರಿಂದ ಪ್ರತಿಭಟನೆ ನಡೆಸಲಾಯಿತು.
ಕೊಪ್ಪಳ ಜಿಲ್ಲೆಯ ಕುಣಿಕೇರಿ ಗ್ರಾಮಪಂಚಾಯತ್ ಮುಂದೆ ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ಅನುಮತಿ ನೀಡಿದ್ದರಿಂದ ನಿಯಮ ಉಲ್ಲಂಘಿಸಿ ಅತಿಹೆಚ್ಚು ಮಣ್ಣು ಸಾಗಾಣಿಕೆ ಮಾಡಲಾಗುತ್ತಿದೆ. ಮಣ್ಣು ಸಾಗಾಣಿಕೆಯಿಂದ ಕೆರೆ ಪ್ರದೇಶಕ್ಕೆ ಹಾನಿಯಾಗುತ್ತಿದೆ. ಅನುಮತಿ ಪಡೆದ ಗುತ್ತಿಗೆದಾರ ಇಟ್ಟಿಗೆ ತಯಾರು ಘಟಕಗಳಿಗೆ ಮಣ್ಣು ಮಾರಾಟ ಮಾಡುತ್ತಿದ್ದಾರೆ. 1 ಮೀಟರ್ ಅನುಮತಿ ನೀಡಿದರೂ 4 ಮೀಟರ್ ಆಳವಾಗಿ ಮಣ್ಣು ತೆಗೆದಿದ್ದಾರೆ ಎಂದು ಪ್ರತಿಭಟನಕಾರರು ಆರೋಪಿಸಿದ್ದಾರೆ.
ಅಲ್ಲದೆ ಗುತ್ತಿಗೆ ಪರವಾನಿಗೆ ರದ್ದು ಪಡಿಸಬೇಕು. ನಮಗೆ ಉದ್ಯೋಗ ಖಾತ್ರಿ ಕೂಲಿ ಕೆಲಸ ಕೊಡಬೇಕು ಎಂದು ಅಧಿಕಾರಿಗಳಿಗೆ ಒತ್ತಾಯ ಮಾಡಿದ್ದಾರೆ. ಒಂದು ವೇಳೆ ಮಣ್ಣು ಸಾಗಾಣಿಕೆ ತಡೆಯದಿದ್ದರೆ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ಗ್ರಾಮಸ್ಥರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.