ಯಾದಗಿರಿ: ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಶವವನ್ನು ಬಟ್ಟೆಯಲ್ಲಿ ಸುತ್ತಿ ಸಾಗಿಸಿರುವ ಘಟನೆ, ಯಾದಗಿರಿ ಜಿಲ್ಲೆಯ ಯಡ್ಡಳ್ಳಿ ಗ್ರಾಮದಲ್ಲಿ ನಡೆದಿದೆ. ಎರಡು ಟ್ರಾಕ್ಟರ್ ಗಳ ನಡುವೆ ಅಪಘಾತ ಸಂಭವಿಸಿ ಮಲ್ಲಪ್ಪ (33) ಎಂಬ ವ್ಯಕ್ತಿ ಮೃತಪಟ್ಟಿದ್ದಾರೆ.
ಒಂದೂವರೆ ಕಿಲೋಮೀಟರ್ ದೂರದಲ್ಲೇ ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದರೂ ಕೂಡ ಆ್ಯಂಬುಲೆನ್ಸ್ ಬಾರದಿರುವುದರಿಂದ ಮೃತಪಟ್ಟ ವ್ಯಕ್ತಿಯನ್ನ ಚಾದರ್ ನಲ್ಲಿ ಸುತ್ತಿ ಸಾಗಿಸಲಾಗುತ್ತಿದೆ. ಸದ್ಯ ಈ ವೀಡಿಯೋ ಎಲ್ಲೆಡೆ ವೈರಲಾಗ್ತಿದ್ದು ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ