ಮಂಡ್ಯ: ಅಧಿಕಾರಿಗಳ ಬೇಜವಾಬ್ಧಾರಿಗೆ ಉಪಲೋಕಾಯುಕ್ತ ಬಿ ವೀರಪ್ಪ ತರಾಟೆಗೆ ತೆಗೆದುಕೊಂಡಿದ್ದಾರೆ. ನೆನ್ನೆ ರಾತ್ರಿ ಮಂಡ್ಯ ಗ್ರಾ.ಪಂಚಾಯಿಗೆ ಉಪಲೋಕಾಯುಕ್ತರು ಕಡತಗಳ ಪರಿಶೀಲನೆಗೆ ಭೇಟಿ ನೀಡಿದ್ದಾಗ ಮೆಟ್ಟಿಲುಗಳ ಬಳಿ ಬಲ್ಬ್ ಹಾಳಾಗಿ ಕತ್ತಲು ಆವರಿಸಿತ್ತು. ಆಗ PDO ಸುನೀಲ್ ಕುಮಾರ್ ಗೆ ಬಿ ವೀರಪ್ಪ ಕ್ಲಾಸ್ ತೆಗೆದುಕೊಂಡಿದ್ದಾರೆ.
ಬಲ್ಬ್ ಹಾಳಾಗಿ ಎಷ್ಟು ದಿನವಾಗಿದೆ. ಒಂದು ಬಲ್ಬ್ ಹಾಕಿಸುವ ಯೋಗ್ಯತೆ ಇಲ್ವಾ, ಕಛೇರಿಯಲ್ಲಿ ಏನು ಕತ್ತೆ ಕಾಯುತ್ತಿದ್ದೀರಾ, ಸ್ಟೈಲಾಗಿ ಗಡ್ಡ ಬಿಟ್ಟು ನಟ ಯಶ್ ತರ ಬಂದಿದ್ದೀರಾ. ನಿನ್ ಮುಂದೆ ನಟ ಯಶ್ ಎಲ್ಲೋಗ್ಬೇಕು.? ಗಡ್ಡ ಬಿಟ್ಟು, ಜೀನ್ಸ್ ಪ್ಯಾಂಟ್ ಹಾಕೊಂಡ್ ಸ್ಟೈಲಾಗ್ ಬಂದ್ರೆ ಸಾಕ..? ಅದೇ ರೀತಿ ಕೆಲಸವನ್ನು ಕೂಡ ನಿಯತ್ತಾಗಿ ಮಾಡಬೇಕಲ್ವಾ..? 20-20 ಮ್ಯಾಚ್ ರೀತಿ ಸಿಕ್ಕಷ್ಟು ವಸೂಲಿ ಮಾಡಿಕೊಂಡು ಹೋಗ್ತಿರಾ? ಆತ್ಮ ಸಾಕ್ಷಿಗೆ ಒಪ್ಪುವಂತ ಕೆಲಸ ಮಾಡಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ನಂತರ ತನ್ನ ಜೇಬಿನಿಂದಲೇ 80 ರೂ ಕೊಟ್ಟು ಬಲ್ಬ್ ಹಾಕಿಸಿದ್ದಾರೆ.