ಬೆಂಗಳೂರು: ಜಾತಿ ಜನಗಣತಿ ವರದಿ ತಿರಸ್ಕರಿಸುವಂತೆ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಒತ್ತಾಯಿಸಿದ್ದಾರೆ.
ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿರುವ ಅವರು, ಅವೈಜ್ಞಾನಿಕವಾಗಿ ಕೂಡಿರುವ ವರದಿಯನ್ನು ತಿರಸ್ಕಾರ ಮಾಡಬೇಕು. ನಮ್ಮ ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮುದಾಯದ 1.25 ಕೋಟಿ ಜನಸಂಖ್ಯೆ ಇದೆ. ಆದರೆ, ಉದ್ಧೇಶಪೂರ್ವಕವಾಗಿ 30 ಲಕ್ಷ ತೋರಿಸಲಾಗಿದೆ.
ಸಾದರ ಲಿಂಗಾಯತ ಸಮುದಾಯದ ಜನಸಂಖ್ಯೆ 67 ಸಾವಿರ ತೋರಿಸಲಾಗಿದೆ. ಆದರೆ, ಚನ್ನಗಿರಿ ಒಂದೇ ಕ್ಷೇತ್ರದಲ್ಲಿ 60 ಸಾವಿರ ಸಾದರ ಲಿಂಗಾಯತರಿದ್ದಾರೆ. ಈ ವರದಿಯಲ್ಲಿ ತಪ್ಪು ತಪ್ಪು ಅಂಶಗಳನ್ನು ಸೇರಿಸಲಾಗಿದೆ. ಹೀಗಾಗಿ ಈ ವರದಿ ಕೈ ಬಿಡಬೇಕು ಎಂದು ಮನವಿ ಮಾಡಿದ್ದಾರೆ.