ಉಡುಪಿ : ಅಜೆಕಾರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕೆಲವು ದಿನಗಳ ಹಿಂದೆ ತಲವಾರು ತೋರಿಸಿ ಕೊಟ್ಟಿಗೆಯಲ್ಲಿದ್ದ ದನಗಳನ್ನು ಕದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರು ಕಾರ್ಕಳ ನಲ್ಲೂರು ಗ್ರಾಮದ ನಿವಾಸಿ ಯೂನಿಸ್(31),ಮೂಡಬಿದ್ರೆ ಕಲ್ಲಬೆಟ್ಟುವಿನ ನಿವಾಸಿ ನಾಸೀರ್(28) ಹಾಗೇ ಮೂಡುಬಿದ್ರೆಯ ಪುತ್ತಿಗೆ ಗ್ರಾಮದ ನಿವಾಸಿ ಇಕ್ಬಾಲ್(29) ಎಂದು ಗುರುತಿಸಲಾಗಿದೆ. ಇವರಿಂದ ಕೃತ್ಯಕ್ಕೆ ಬಳಸಿದ ಕಾರು, ಎರಡು ತಲವಾರು, ಬೊಲೆರೋ ವಾಹನ ಸೇರಿ 5,87,000 ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸೆ.28 ರಂದು ರಾತ್ರಿ ಜಯಶ್ರೀ ಎಂಬವರ ಮನೆಯ ದನದ ಕೊಟ್ಟಿಗೆಗೆ ನುಗ್ಗಿ ತಲವಾರ್ ತೋರಿಸಿ ಸುಮಾರು 35000 ಸಾವಿರ ಮೌಲ್ಯದ ಮೂರು ಗೋವು ಕಳ್ಳತನ ಮಾಡಿದ್ದರ ಕುರಿತಾಗಿ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದೀಗ ಪೊಲೀಸರು ತನಿಖೆ ನೆಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.



















