ಶಿವಮೊಗ್ಗ : ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಶಿವಮೊಗ್ಗದ ಯಡವಾಲ ಗ್ರಾಮದಲ್ಲಿ ತಡರಾತ್ರಿ ಈ ಘಟನೆ ನಡೆದಿದೆ. ಗೌತಮ್ ನಾಯ್ಕ್ (22) ಹಾಗೂ ಚಿರಂಜೀವಿ(22) ಸಾವನ್ನಪ್ಪಿದ ಯುವಕರು ಎನ್ನಲಾಗಿದೆ. ಶಿವಮೊಗ್ಗ ತಾಲೂಕಿನ ಆಯನೂರು ಸಮೀಪದ ಯಡವಾಲ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಯಡವಾಲ ಗ್ರಾಮದ ನಿವಾಸಿ ಗೌತಮ್ ನಾಯ್ಕ್, ಶಿವಮೊಗ್ಗ ನಗರದ ಕುಂಬಾರಗುಂಡಿ ನಿವಾಸಿ ಚಿರಂಜೀವಿ ಸಾವನ್ನಪ್ಪಿದ್ದಾರೆ. ಯಡವಾಲ ಗ್ರಾಮದ ಸ್ನೇಹಿತನ ಮನೆಗೆ ಶಿವಮೊಗ್ಗದಿಂದ 10 ಜನ ಯುವಕರು ತೆರಳಿದ್ದರು. ಮನೆಗೆ ಭೇಟಿ ನೀಡಿ, ಬಳಿಕ ತೋಟದಲ್ಲಿ ಪಾರ್ಟಿಗೆ ಹೋಗಿದ್ದರು. ಆ ವೇಳೆ ಕೃಷಿ ಹೊಂಡದ ಬಳಿ ತೆರಳಿ, ಕಾಲು ಜಾರಿ ಬಿದ್ದಿರುವ ಓರ್ವ ಯುವಕ ಸಾವನ್ನಪ್ಪಿದ್ದಾನೆ. ಆತನ ರಕ್ಷಣೆಗೆ ತ ರಳಿದ್ದ ಮತ್ತೋರ್ವ ಯುವಕ ಕೂಡ ನೀರು ಪಾಲಾಗಿದ್ದಾನೆ. ಈ ಕುರಿತು ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.