ಬೆಂಗಳೂರು: ಇಲ್ಲಿಯ ಎಚ್ ಬಿಆರ್ ಲೇಔಟ್ ನಲ್ಲಿ ಯುವಕನ ಕೊಲೆ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಿಂದಪುರ ಪೊಲೀಸರು SDPI ಕಾರ್ಯಕರ್ತರಾದ ಮೊಹಮ್ಮದ್ ಓವೈಸ್, ಅಬ್ದುಲದ ಅಲೀಮ್, ಮೊಹಮ್ಮದ್ ಹನೀಫ್ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ.
ಕಳೆದ 24ರಂದು ರಾತ್ರಿ 11.30ರ ವೇಳೆಗೆ ಈ ಘಟನೆ ನಡೆದಿತ್ತು. ಆರೋಪಿಗಳು ಇಮ್ರಾನ್ ಖಾನ್ (32) ಎಂಬಾತನನ್ನು ಕೊಲೆ ಮಾಡಿದ್ದರು. HBR ಲೇಔಟ್ ನ 13ನೇ ಕ್ರಾಸ್ ನಲ್ಲಿ ಈ ಘಟನೆ ನಡೆದಿತ್ತು.
ಆಟೋದಲ್ಲಿ ಬಂದು ನಡೆದುಕೊಂಡು ಹೋಗುತ್ತಿದ್ದವನ ಹತ್ಯೆ ನಡೆದಿತ್ತು. ತನಿಖೆಗೆ ಇಳಿದಿರುವ ಪೊಲೀಸರು ಈಗ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಜೈಲಿನಲ್ಲಿರುವ ಅಬ್ಬಾಸ್ ಎಂಬಾತನಿಂದ ಕೊಲೆ ಮಾಡಿಸಿರುವ ಆರೋಪ ಕೇಳಿ ಬಂದಿದೆ.
ಡಿ.ಜೆ ಹಳ್ಳಿ ಠಾಣೆಗೆ ಬೆಂಕಿ ಇಟ್ಟ ಪ್ರಕರಣದಲ್ಲಿ ಅಬ್ಬಾಸ್ ಅರೆಸ್ಟ್ ಆಗಿದ್ದಾನೆ. ಕೊಲೆಯಾಗಿರುವ ಇರ್ಫಾನ್ ಕೂಡ ಬಂಧಿತನಾಗಿ ಜೈಲು ಸೇರಿದ್ದ. ಆದರೆ, ಇರ್ಫಾನ್ ಕಳೆದ ಕೆಲವು ತಿಂಗಳ ಹಿಂದೆ ಬೇಲ್ ಮೇಲೆ ಹೊರಗಡೆ ಬಂದಿದ್ದ. ಇಬ್ನರೂ SDPI ಕಾರ್ಯಕರ್ತರಾಗಿದ್ದರು. ಜೈಲಿನಿಂದ ಹೊರ ಬಂದಮೇಲೆ ಅಬ್ಬಾಸ್ ಪತ್ನಿಯನ್ನು ಇರ್ಫಾನ್ ಮದುವೆಯಾಗಿದ್ದ ಎನ್ನಲಾಗಿದೆ.
ಅಬ್ಬಾಸ್ ಗೆ ಡಿವೋರ್ಸ್ ಕೊಡಿಸಿ ಮದುವೆಯಾಗಿದ್ದ ಎನ್ನಲಾಗಿದೆ. ಇದೇ ದ್ವೇಷದಿಂದ ಆರೋಪಿಗಳಿಗೆ ಹೇಳಿ ಕೊಲೆ ಮಾಡಿಸಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಮೂವರು ಆರೋಪಿಗಳನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತರು ಕೂಡ ಎಸ್ ಡಿಪಿಐ ಕಾರ್ಯಕರ್ತರು ಎನ್ನಲಾಗಿದೆ. ಗೋವಿಂದಪುರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.