ನವದೆಹಲಿ: ಅಯೋಧ್ಯೆ (Ayodhya) ರಾಮಮಂದಿರ (Ram Mandir) ಸ್ಫೋಟಿಸುವುದಾಗಿ ದುರುಳರು ಬೆದರಿಕೆ ಹಾಕಿದ್ದಾರೆಂದು ತಿಳಿದು ಬಂದಿದೆ.
ಅನಾಮಧೇಯ ಮೇಲ್ ನಿಂದ ಇಮೇಲ್ ಮೂಲಕ ದುರುಳರು ಬೆದರಿಕೆ ಹಾಕಿದ್ದಾರೆ. ತಮಿಳುನಾಡು ಮೂಲದ ವ್ಯಕ್ತಿಯೊಬ್ಬ ಇಂಗ್ಲಿಷ್ ನಲ್ಲಿ ಇಮೇಲ್ ಮೂಲಕ ರಾಮಮಂದಿರ ಟ್ರಸ್ಟ್ ಗೆ ಬೆದರಿಕೆಯ ಮೇಲ್ ಕಳುಹಿಸಿದ್ದಾನೆಂದು ತಿಳಿದು ಬಂದಿದೆ.
ಈ ಹಿನ್ನೆಲೆಯಲ್ಲಿ ಮಂದಿರಕ್ಕೆ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಿರುವ ಪೊಲೀಸರು ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ. ಆದರೆ, ಈ ವಿಷಯವನ್ನು ಅಧಿಕೃತವಾಗಿ ರಾಮಮಂದಿರ ಟ್ರಸ್ಟ್ ಹಾಗೂ ಭದ್ರತಾ ಸಂಸ್ಥೆಗಳು ಬಹಿರಂಗಪಡಿಸಿಲ್ಲ.