ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಜನಗಳನ್ನು ರಕ್ಷಿಸುವ ಪೊಲೀಸರೇ ಭಕ್ಷಕರಾಗುತ್ತಿರುವುದು ದುರಂತವೇ ಸರಿ. ಹೊಲವೇ ಎದ್ದು ಬೇಲಿ ಮೇಯ್ದರೇ ಏನು ಗತಿ? ಎಂದು ಈಗ ಹಲವರು ಮಾತನಾಡಿಕೊಳ್ಳುವಂತಹ ಘಟನೆಯೊಂದು ವರದಿಯಾಗಿದೆ.
ಜಿಲ್ಲೆಯ ಪಾತಪಾಳ್ಯ ಪೊಲೀಸ್ ಠಾಣೆಯ ಪೊಲೀಸ್ ಪೇದೆಯೊಬ್ಬರು ಡಾಬಾದಲ್ಲಿ ಊಟ ಮಾಡಲು 4 ಸಾವಿರ ರೂಪಾಯಿ ವಸೂಲಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಪೊಲೀಸಪ್ಪ ಹಣ ಕೇಳಿದಾಗ ಡಾಬಾ ಮಾಲೀಕರು 1 ಸಾವಿರ ಕೊಡಲು ಮುಂದಾಗಿದ್ದಾರೆ. ಆಗ ನಾವು ನಾಲ್ಕು ಜನ ಊಟ ಮಾಡಬೇಕು. ಒಂದು ಸಾವಿರ ಬೇಡ ನಾಲ್ಕು ಸಾವಿರ ಕೊಡು ಎಂದು ಬೇಡಿಕೆ ಇಟ್ಟಿದ್ದಾರೆ. ಹಣ ಕೊಟ್ಟಿಲ್ಲಾ ಅಂದ್ರೆ ಕೇಸ್ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ. ಹಣ ಪಡೆದ ವೀಡಿಯೋ ರೆಕಾರ್ಡ್ ಆಗಿದ್ದು ಎಲ್ಲಾ ಕಡೆ ವೈರಲ್ ಆಗುತ್ತಿದೆ.