ಬೆಂಗಳೂರು: ಉಗ್ರರ ಗುಂಡಿಗೆ ಬಲಿಯಾಗಿರುವ ಭರತ್ ಭೂಷಣ್ ನನ್ನು ದೂರದ ಸಂಬಂಧಿ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ವರ್ಷದ ಮಗು ಮುಖ ನೋಡಿ ತಮ್ಮನ್ನು ಬಿಡುವಂತೆ ಉಗ್ರರಿಗೆ ಬೇಡಿಕೊಂಡು ಪಾಪಿಗಳು ಬಿಡಲಿಲ್ಲವಂತೆ. ಮೂರು ವರ್ಷದ ಮಗು ಅಪ್ಪನ ತಲೆಯಲ್ಲಿ ರಕ್ತ ಬರುತ್ತಿದೆ ಅಂತಾ ತಾಯಿಗೆ ಹೇಳಿದೆ. ಆಗ ತಾಯಿಗೆ ಹೇಗಾಗಬೇಡ ಹೇಳಿ ಎಂದು ವಿಷಾಧಿಸಿದ್ದಾರೆ.
ಪತ್ನಿ, ಮಗು ಕಣ್ಣೆದುರೇ ಘೋರ ಕೃತ್ಯ ನಡೆದಿದೆ. ಮುಸ್ಲಿಂ ಉಗ್ರರಿಂದ ಈ ಕೃತ್ಯ ನಡೆದಿದೆ. ಹಿಂದೂನಾ? ಅಥವಾ ಮುಸ್ಲಿಂ ಅಂತಾ ಕೇಳಿ ಟಾರ್ಗೆಟ್ ಮಾಡಿ ಗುಂಡು ಹಾರಿಸಿದ್ದಾರೆ.
ಇದರಿಂದಾಗಿ ಆ ಕುಟುಂಬ ಆಘಾತ ಎದುರಿಸುತ್ತಿದೆ. ಅವರ ಮಾತುಗಳನ್ನು ಕೇಳಿದರೆ ಕಲ್ಲು ಹೃದಯ ಕರಗಿ ಹೋಗುತ್ತದೆ. ಇಡೀ ಭಾರತ, ಹಿಂದೂಸ್ಥಾನ ಒಂದಾಗಬೇಕು. 2008 ರಲ್ಲಿ ಅವರ ತಂದೆ ಡಿಡಿಪಿಐ ಆಗಿ ಕೆಲಸ ಮಾಡಿದ್ದರು. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ. ಭರತ್ ಭೂಷಣ್ ಆಸ್ಪತ್ರೆ ನಿರ್ಮಾಣ ಮಾಡುವ ಕನಸು ಕಂಡಿದ್ದರು ಎಂದು ಹೇಳಿದ್ದಾರೆ.
ಭರತ್ ಅವರ ತಾಯಿ ಕೂಡ ಕಾಶ್ಮೀರಕ್ಕೆ ಹೋಗಲು ಮುಂದಾಗಿದ್ದರು. ಆದರೆ, ಅವರನ್ನು ಒಪ್ಪಿಸಿ ಇಲ್ಲಿಯೇ ಬಿಟ್ಟು ಹೋಗಿದ್ದರು. ಪಾಕಿಸ್ತಾನ್ ಬದುಕಿರುವವರೆಗೆ ಈ ಮನಸ್ಥಿತಿ ಹೋಗಲ್ಲ. ಈಗಾಗಲೇ ಸುಂದರ ಬಡಾವಣೆಯ ಪಾರ್ಕ್ ಗೆ ಭರತ್ ಭೂಷಣ್ ಹೆಸರಿಡಲು ಮನವಿ ಮಾಡಿದ್ದಾರೆ. ಭರತ್ ಭೂಷಣ್ ನೆನಪು ನಮ್ಮಲ್ಲಿ ಸದಾ ಉಳಿಯಲಿದೆ ಎಂದು ಹೇಳಿದ್ದಾರೆ.