ಚಿಕ್ಕಮಗಳೂರು: ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಹಿರೇಕೊಳಲೆ ಕೆರೆ ಕೋಡಿ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಕೋಡಿಬಿದ್ದ ಕೆರೆಗೆ ಬಾಗಿನ ಅರ್ಪಿಸಲಾಗಿದೆ.
ದಶಕದ ಬಳಿಕ ಜೂನ್ ತಿಂಗಳಿನಲ್ಲಿ ಕೆರೆ ಕೋಡಿ ಬಿದ್ದಿದೆ.
ಹೀಗಾಗಿ ಜಿಲ್ಲೆಯಲ್ಲೇ ಕೋಡಿ ಬಿದ್ದ ಮೊದಲ ಕೆರೆಗೆ ಬಾಗಿನವನ್ನು ಜಿಲ್ಲಾಡಳಿತ ಅರ್ಪಿಸಿದೆ. ಹಿರೇಕೊಳಲೆ ಕೆರೆಯು ಚಿಕ್ಕಮಗಳೂರು ನಗರಕ್ಕೆ ಕುಡಿಯುವ ನೀರಿನ ಮೂಲವಾಗಿದೆ. ಈ ಕೆರೆ ಚಂದ್ರದ್ರೋಣ ಪರ್ವತದ ತಪ್ಪಲಿನಲ್ಲಿದೆ. ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಸುರಿದ ಮಳೆಯಿಂದ ಕೆರೆಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ.
ಕೆರೆಗೆ ಚಿಕ್ಕಮಗಳೂರು ಶಾಸಕ ತಮ್ಮಯ್ಯ ದಂಪತಿ ಬಾಗಿನ ಅರ್ಪಿಸಿದ್ದಾರೆ. ಈ ವೇಳೆ ಡಿಸಿ ಮೀನಾ ನಾಗರಾಜ್, ತಹಸೀಲ್ದಾರ್ ರೇಷ್ಮಾ ಇದ್ದರು.