ಎನ್ ಐಎ ತನಿಖೆ ವೇಳೆ ಬಾರೀ ಆಘಾತಕಾರಿ ಅಂಶಗಳು ಹೊರ ಬಿದ್ದಿವೆ. ಅಸಲಿಗೆ ಉಗ್ರರ ಟಾರ್ಗೆಟ್ ಕೇವಲ ಬೈಸರನ್ ವ್ಯಾಲಿ ಮಾತ್ರ ಆಗಿರಲಿಲ್ಲ. ಬದಲಿಗೆ ಮೂರು ತಾಣಗಳ ಮೇಲೆ ಏಕಕಾಲಕ್ಕೆ ದಾಳಿ ಮಾಡುವ ಸಂಚು ರೂಪಿಸಿದ್ದರು ಜಿಹಾದಿಗಳು.
ಹೌದು, ಬೈಸರನ್ ವ್ಯಾಲಿ, ಬೇತಾಬ್ ವ್ಯಾಲಿ ಮತ್ತು ಅರು ವ್ಯಾಲಿಯನ್ನು ಗುರಿಯಾಗಿಸಿ ಹತ್ಯಾಕಾಂಡ ರೂಪಿಸಿದ್ದು ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲ ಏಪ್ರಿಲ್ 15ರ ಹೊತ್ತಿಗೆಲ್ಲಾ ಈ ಧರ್ಮಾಂಧರು ಪಹಲ್ಗಾಮ್ ತಲುಪಿದ್ದು, ಕೂಡ ಸಾಬೀತಾಗಿದೆ.
ದಾಳಿ ನಡೆಸಲು ಯೋಜಿಸಿದ್ದ ಸ್ಥಳಗಳಲ್ಲಿ ಸಂಚರಿಸಿದ್ದ ಉಗ್ರರು, ಅಲ್ಲಿನ ಪೋಟೋಗಳನ್ನು ಸಂಗ್ರಹಿಸಿದ್ದರು. ಹೇಗೆ ದಾಳಿ ಮಾಡಬೇಕು? ಎಲ್ಲಿಂದ ಪರಾರಿಯಾಗಬೇಕು? ಎಂಬ ಸಂಪೂರ್ಣ ನೀಲನಕ್ಷೆಯನ್ನು ಸಿದ್ಧಪಡಿಸಿಕೊಂಡಿದ್ದರು. ಅಷ್ಟೇ ಅಲ್ಲ ಈ ನರಮೇಧಕ್ಕೆ ಕಾಶ್ಮೀರದ 20ಕ್ಕೂ ಹೆಚ್ಚು ಸ್ಥಳೀಯರು ಸಾಥ್ ನೀಡಿರುವುದು ಕೂಡ ಸಾಬೀತಾಗಿದೆ. ಈಗಾಗಲೇ ಈ ಪೈಕಿ ಓರ್ವನನ್ನು ಬಂಧಿಸಲಾಗಿದ್ದು, 2500ಕ್ಕೂ ಹೆಚ್ಚು ಜನರನ್ನು ವಿಚಾರಣೆಗೊಳಪಡಿಸಲಾಗಿದೆ. ಬೈಸರನ್ ಹೊರತು ಪಡಿಸಿ ಉಳಿದೆಡೆ ಸೇನಾ ಭದ್ರತೆ ಹೆಚ್ಚಿದ್ದ ಕಾರಣ ಕೇವಲ ಒಂದೇ ಸ್ಥಳದಲ್ಲಿ ಉಗ್ರರು ದುಶ್ಕೃತ್ಯವೆಸಗಿದ್ದಾರೆ ಅಂತಾ ಎನ್ ಐಎ ವರದಿಯಲ್ಲಿ ಉಲ್ಲೇಖಿಸಿದೆ.