ಧಾರವಾಡ: ಭಾರತ ಪಾಕಿಸ್ತಾನ ಗಡಿಯಲ್ಲಿ ಅಘೋಷಿತ ಯುದ್ಧ ಆರಂಭವಾಗಿದೆ.
ಯುದ್ಧದ ವಾತಾವರಣ ಆವರಿಸಿರುವ ಹಿನ್ನೆಲೆಯಲ್ಲಿ ಭಾರತೀಯ ಸೇನೆಯನ್ನು ಬೆಂಬಲಿಸಿ ಮುಸ್ಲಿಂ ಸಮುದಾಯದದಿಂದ ನಗರದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಪಾಕಿಸ್ತಾನ ವಿರುದ್ಧ ನಡೆಯುತ್ತಿರುವ ಯುದ್ಧದಲ್ಲಿ ನಮ್ಮ ಭಾರತಕ್ಕೆ ಜಯ ಸಿಗಲಿ, ನಮ್ಮ ಯೋಧರು ಪಾಕಿ ಉಗ್ರರ ವಿರುದ್ಧ ಹೋರಾಡಿ ಸುರಕ್ಷಿತವಾಗಿ ತಮ್ಮ ತಾಯ್ನಾಡಿಗೆ ಆಗಮಿಸಲಿ ಎಂದು ಅಲ್ಲಾಹ್ ಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.
ಪ್ರತಿ ಶುಕ್ರವಾರವು ಕೂಡ ಮಸೀದಿಯಲ್ಲಿ ಮುಸ್ಲಿಂರು ಪ್ರಾರ್ಥನೆ ಮಾಡುತ್ತಾರೆ. ಆದರೆ, ಈಗ ಇಂಡಿಯಾ ಪಾಕಿಸ್ತಾನ ಯುದ್ದ ಇರುವುದರಿಂದ ವಿಶೇಷವಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.