ಭಾರತ ಪಾಕ್ ಗಡಿಯಲ್ಲಿ ಈಗಾಗಲೇ ಯುದ್ದದ ಕಾರ್ಮೋಡ ಸೃಷ್ಟಿಯಾಗಿದೆ. ಯುದ್ಧದ ಸನ್ನಿವೇಶ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಭಾರತೀಯ ಸೈನಿಕರ ಶ್ರೇಯಸ್ಸು ಯಶಸ್ಸಿಗಾಗಿ ಹಿಂದೂ ಸಂಘಟನೆಗಳು ತಯಾರಿ ನಡೆಸಿವೆ.
ಉಗ್ರರ ಅಟ್ಯಾಕ್ ಹಿನ್ನೆಲೆಯಲ್ಲಿ ಯೋಧರಿಗೆ ಧೈರ್ಯ ಮತ್ತು ಶಕ್ತಿ ತುಂಬಲು ಮಹಾಯಾಗ, ರಾಮ ಭದ್ರಕಯಾಗ, ಸಂಕಲ್ಪಯಾಗ ಹಮ್ಮಿಕೊಳ್ಳಲಾಗಿದೆ. ಈ ವೇಳೆ ಪರುಶುಮರಾಮ ಕೊಡಲಿಯೊಂದಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗಿದೆ. ಜೊತೆಗೆ ಇಂದು ರಾಮಸೇನೆಯಿಂದ ಕೊಡಲಿ ಮೆರವಣಿಗೆಯನ್ನು ಕೂಡ ನಡೆಸಲಾಗಿದೆ.