ಬೆಂಗಳೂರು: ಜಾತಿ ಗಣತಿ ನಡೆದ ವೇಳೆ 6 ಕೋಟಿ ಇದ್ದ ರಾಜ್ಯದ ಜನಸಂಖ್ಯೆ ಈಗ 7 ಕೋಟಿ ಆಗಿದೆ. ಉಳಿದ ಒಂದು ಕೋಟಿ ಜನರನ್ನು ಸಮುದ್ರಕ್ಕೆ ಬಿಡಬೇಕಾ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R Ashok) ಹೇಳಿದ್ದಾರೆ.
ಜಾತಿ ಜನಗಣತಿ ವರದಿ (Caste Census) ಕುರಿತು ರಾಜ್ಯ ಬಿಜೆಪಿ (BJP) ಕಚೇರಿಯಲ್ಲಿ ಬಿವೈ ವಿಜಯೇಂದ್ರ, ಆರ್.ಅಶೋಕ್ ನೇತೃತ್ವದಲ್ಲಿ ವರದಿ ಬಗ್ಗೆ ಸಭೆ ನಡೆಯಿತು. ಈ ವೇಳೆ ಮಾತನಾಡಿದ ಅವರು, ಸಮೀಕ್ಷೆ ನಡೆದಾಗ 6 ಕೋಟಿ ಜನಸಂಖ್ಯೆ ಇತ್ತು. ಈಗ 7 ಕೋಟಿ ಆಗಿದೆ. ಅವರನ್ನೆಲ್ಲ ಎಲ್ಲಿ ಬಿಡಬೇಕು ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಮಾತನಾಡಿ, ಜಾತಿ ಜನಗಣತಿ ವರದಿ ಬಗ್ಗೆ ಸರ್ಕಾರ ಏನು ತೀರ್ಮಾನ ಮಾಡುತ್ತದೋ ಮಾಡಲಿ. ಸರ್ಕಾರ ತನ್ನ ನಿರ್ಧಾರ ಅಂತಿಮವಾಗಿ ತಿಳಿಸಿದ ನಂತರ ನಮ್ಮ ನಿಲುವು ನಾವು ತೆಗೆದುಕೊಳ್ಳುತ್ತೇವೆ ಎದಿದ್ದಾರೆ.