ಆಪರೇಶನ್ ಸಿಂಧೂರ್ ಭಾರತದ ಮೋಸ್ಟ್ ವಾಂಟೆಡ್ ಉಗ್ರರ ರುಂಡ ಚೆಂಡಾಡಿದೆ. ಲಷ್ಕರ್ ಎ ತೋಯ್ಬಾದ ಅಬ್ಲುಲ್ ರೌಫ್, ಖಾಲಿದ್ ಅಬು ಅಕ್ಸಾ ಸೇರಿದಂತೆ ಐವರು ಅತ್ಯುಗ್ರರನ್ನು ಹೊಡೆದುರುಳಿಸಲಾಗಿತ್ತು. ಆ ಜಿಹಾದಿಗಳ ಅಂತ್ಯಕ್ರಿಯೆಯಲ್ಲಿ ಪಾಕಿಸ್ತಾನ ಸೇನೆ, ಪೊಲೀಸ್ ಇಲಾಖೆ ಸೇರಿದಂತೆ ಜನಪ್ರತಿನಿಧಿಗಳು ಭಾಗಿಯಾಗಿದ್ದು ದೊಡ್ಡ ಸದ್ದು ಮಾಡಿತ್ತು. ಅಸಲಿಗೆ ಈ ರಣರಾಕ್ಷಸರ ಅಂತ್ಯ ಸಂಸ್ಕಾರದಲ್ಲಿ ಯಾರೆಲ್ಲಾ ಭಾಗಿಯಾಗಿದ್ದರು ಎನ್ನುವ ಸತ್ಯವೀಗ ಬಯಲಾಗಿದೆ.
ಲೆಫ್ಟಿನೆಂಟ್ ಜನರಲ್ ಫಯಾಜ್ ಹುಸೇನ್, ಮೇಜರ್ ಜನರಲ್ ರಾವ್ ಇಮ್ರಾನ್, ಬ್ರಿಗೇಡಿಯರ್ ಮೊಹಮದ್ ಫಾರೂಕಿ ಜೊತೆ ಪಾಕಿಸ್ತಾನ ಪಂಜಾಬ್ ಪ್ರಾಂತ್ಯದ ಜನಪ್ರತಿನಿಧಿ ಶೋಯೆಬ್ ಅಹ್ಮದ್ ಕೂಡಾ ಉಪಸ್ಥಿತರಿದ್ರು. ಮೃತ ಉಗ್ರರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದ ಈ ಗಣ್ಯರು, ಅಂತಿಮ ಪ್ರಾರ್ಥನೆಯಲ್ಲೂ ಭಾಗವಹಿಸಿದ್ದರು.