ಬೆಂಗಳೂರು: ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ರಿಕ್ಕಿ ರೈ ಮೇಲೆ ಗುಂಡಿನ ದಾಳಿ ನಡೆದರೂ ಅವರು ಬದುಕಿದ್ದಾರೆ. ಆದರೆ, ಅವರು ಬದುಕಿಳಿಯಲು ಅವರಪ್ಪ ನೀಡಿದ್ದ ಸ್ಫಟಿಕದ ಹಾರವೇ ಕಾರಣ ಎನ್ನಲಾಗುತ್ತಿದೆ.
ಗುಂಡೇಟು ಬಿದ್ದಾಗ ರಿಕ್ಕಿ ರೈ ಬಾಯಿಂದ ಬಂದಿದ್ದು ಮಹಾಲಿಂಗೇಶ್ವರನ ಹೆಸರಂತೆ. ಮಹಾಲಿಂಗೇಶ್ವರನ ಸನ್ನಿಧಿಯಲ್ಲಿ ಪೂಜೆ ಮಾಡಿಸಿ ತೊಟ್ಟ ಸ್ಪಟಿಕದ ಹಾರವೇ ರಿಕ್ಕಿ ರೈ ಉಳಿಸಿತಾ? ಎಂದು ಈಗ ಅವರ ಬೆಂಬಲಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಶತ್ರುಗಳಿಂದ ಮಗನ ರಕ್ಷಣೆಗೆ ಮುತ್ತಪ್ಪ ರೈ, ರಿಕ್ಕಿ ರೈ ಕೊರಳಿಗೆ ಸ್ಫಟಿಕದ ಹಾರ ಹಾಕಿದ್ದರಂತೆ. ನೀನು ಎಷ್ಟು ಎತ್ತರಕ್ಕೆ ಬೆಳೆದಿದ್ದರು. ಈ ಹಾರ ತೆಗೆಯ ಬೇಡ ಅಂತ ಮುತ್ತಪ್ಪ ರೈ ಹೇಳಿದ್ರಂತೆ. ರಿಕ್ಕಿ ರೈ ಐಷಾರಾಮಿ ಜೀವನ ನಡೆಸುತ್ತಿದ್ದರು. ಹೀಗಾಗಿ ಯಾವ ಸಂದರ್ಭವೂ ಸ್ಪಟಿಕದ ಹಾರ ತೆಗೆದಿರಲಿಲ್ಲ. ಇದೇ ಶಕ್ತಿ ರಿಕ್ಕಿಯನ್ನು ಕಾಪಾಡಿದೆ ಎಂದು ಆಪ್ತರು ಮಾತನಾಡಿಕೊಳ್ಳುತ್ತಿದ್ದಾರೆ.