ರಾಮನಗರ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ 11 ವರ್ಷಗಳ ಸಾಧನೆಯ ಬಗ್ಗೆ ಅಭಿಯಾನ ಮಾಡುತ್ತೇವೆಂದು ಮಾಜಿ ಸಚಿವ ಎನ್. ಮಹೇಶ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 11 ವರ್ಷಗಳ ಸಾಧನೆ ಬಗ್ಗೆ ನಮ್ಮ ಪಕ್ಷದಿಂದ ಅಭಿಯಾನ ಮಾಡುತ್ತಿದ್ದೇವೆ . ಉತ್ತಮ ಆಡಳಿತ ವ್ಯವಸ್ಥೆ ಇದ್ದರೇ ದೇಶವನ್ನು ಹೇಗೆಲ್ಲ ಬದಲಾವಣೆ ಮಾಡಬಹುದು ಎಂಬುವುದಕ್ಕೆ ಎನ್ ಡಿಎ ಸರ್ಕಾರ ಉತ್ತಮ ಉದಾಹರಣೆ.
ಈ ಹಿಂದೆ 28 ವರ್ಷಗಳ ಕಾಲ ದೇಶ ಏನೂ ಅಭಿವೃದ್ಧಿ ಕಂಡಿಲ್ಲ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಭ್ರಷ್ಟಾಚಾರ ತಡೆಯಲು ಏನು ಮಾಡಲಿಲ್ಲ. ಇದಕ್ಕೆ ಔಷಧಿ ಕಂಡು ಹಿಡಿದ್ದು ಪ್ರಧಾನಿ ಮೋದಿ ಅವರು ಎಂದಿದ್ದಾರೆ.
ರಾಜೀವ್ ಗಾಂಧಿ ಅವರ ಕನಸನ್ನು ಪ್ರಧಾನಿ ಮೋದಿ ಅವರು ನನಸು ಮಾಡಿದ್ದಾರೆ. ಸರ್ಕಾರದಿಂದ ನೂರು ಬಂದರೆ ಅದು ನೇರವಾಗಿ ಜನರಿಗೆ ತಲುಪುವಂತೆ ಮಾಡಿದ್ದಾರೆ. ಆರ್ಥಿಕ ವ್ಯವಸ್ಥೆಯ ಪರಿಣಾಮವಾಗಿ ನಾವು ಇಂದು ವಿಶ್ವದಲ್ಲೇ ನಾಲ್ಕನೇ ಸ್ಥಾನದಲ್ಲಿದ್ದೇವೆ. 2047 ರ ಸಮಯಕ್ಕೆ ಭಾರತ ವಿಶ್ವದ ನಂಬರ್ ಒನ್ ಸ್ಥಾನದಲ್ಲಿ ಇರುತ್ತದೆ. ಸಿದ್ದರಾಮಯ್ಯ ನವರು ಫೈನಾನ್ಸ್ ಕಮಿಷನ್ ಮುಂದೆ ತಮ್ಮ ವಾದವನ್ನು ಇಡಲಿ. ಸುಮ್ಮನೇ ಕೇಂದ್ರದಿಂದ ನಮ್ಮ ತೆರಿಗೆ ಪಾಲು ಬಂದಿಲ್ಲ ಎನ್ನುತ್ತಾರೆ.
ನಿರ್ಮಲ ಸೀತಾರಾಮನ್ ಮುಂದೆ ಸಿದ್ದರಾಮಯ್ಯ ಮಾತನಾಡಿ ತೆರಿಗೆ ತೆಗೆದುಕೊಂಡು ಬರಲಿ. 2014ರ ಮೊದಲು ದೇಶದಲ್ಲಿ ಹಲವು ಬಾಂಬ್ ಪ್ರಕರಣದಲ್ಲಿ ಹಲವರು ಸಾವನ್ನಪ್ಪಿದ್ದಾರೆ. ಆನಂತರ ನಮ್ಮ ರಕ್ಷಣಾ ವ್ಯವಸ್ಥೆ ಸಾಕಷ್ಟು ಬದಲಾವಣೆ ಆಗಿದೆ ಎಂದಿದ್ದಾರೆ.