ಉದ್ಯೋಗ ಸೃಷ್ಟಿಸುವ ಹಿನ್ನೆಲೆಯಲ್ಲಿ ಸಂಸತ್ ಚಳಿಗಾಲದ ಅಧಿವೇಶನದಲ್ಲಿ ಆರ್ಥಿಕ ಬೆಳವಣಿಗೆ, ಆಧುನೀಕರಣ, ಉದ್ಯೋಗ ಸೃಷ್ಟಿಸಲು ಸರ್ಕಾರ ಕೆಲವು ಬಿಲ್ ಗಳನ್ನು ಪ್ರಸ್ತಾಪಿಸಿದೆ.
ಇವುಗಳಲ್ಲಿ ತೈಲ ಕ್ಷೇತ್ರ, ಹಡಗು, ರೈಲ್ವೆ, ವಾಯುಯಾನ ಮತ್ತು ವಿಪತ್ತು ನಿರ್ವಹಣೆ ಒಳಗೊಂಡಿವೆ. ರಾಜ್ಯ ಸಭೆಯಲ್ಲಿ, ತೈಲ ಕ್ಷೇತ್ರಗಳ (ನಿಯಂತ್ರಣ ಮತ್ತು ಅಭಿವೃದ್ಧಿ) ತಿದ್ದುಪಡಿ ಮಸೂದೆ 2024 ,ಯನ್ನು ಆಧುನೀಕರಿಸುವ ಮೂಲಕ ಗಮನಾರ್ಹ ಬದಲಾವಣೆಗೆ ಒತ್ತು ನೀಡಿದೆ. ವ್ಯಾಪಾರಿ ಹಡಗು ಮಸೂದೆ, 2024, ಲಾಡಿಂಗ್ ಮಸೂದೆ 2024 ನೊಂದಿಗೆ ಕಡಲ ಕಾನೂನುಗಳನ್ನು ಸುಗಮಗೊಳಿಸಲು ವಿನ್ಯಾಸಗೊಳಿಸಲಾಗಿದೆ. ಅವುಗಳನ್ನು ಹೆಚ್ಚು ಪರಿಣಾಮಕಾರಿ ಮತ್ತು ಅಂತರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಮಾಡಲಾಗಿದೆ.
ಈ ಮಸೂದೆಗಳು ಶಾಸನಾತ್ಮಕ ಬದಲಾವಣೆಗಳಿಗಿಂತ ಹೆಚ್ಚು ಮಹತ್ವ ಹೊಂದಿದೆ. ಅವು ಒಂದು ರೀತಿಯ “ಭಾರತದ ಭವಿಷ್ಯದ ನೀಲನಕ್ಷೆ”. ವಸಾಹತುಶಾಹಿ ಪರಂಪರೆಯನ್ನು ಅಳಿಸಿಹಾಕುವುದು, ಆರ್ಥಿಕ ಬೆಳವಣಿಗೆಗೆ ನಿರ್ಣಾಯಕ ಕ್ಷೇತ್ರಗಳನ್ನು ಸಬಲೀಕರಣಗೊಳಿಸುವುದು, ಉದ್ಯೋಗ ಸೃಷ್ಟಿಯನ್ನು ಹೆಚ್ಚಿಸುವುದು ಇದರ ಗುರಿ ಎಂದು ಸರ್ಕಾರ ಹೇಳಿದೆ.
ಕರಾವಳಿ ಹಡಗು ಮಸೂದೆ- 2024, ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡುವ ಮೂಲಕ, ಭಾರತೀಯ ರಫ್ತುಗಳನ್ನು ಹೆಚ್ಚು ಮಾಡಿ ಉದ್ಯೋಗಗಳನ್ನು ಸೃಷ್ಟಿಸುತ್ತದೆ. ವಿಪತ್ತು ನಿರ್ವಹಣಾ (ತಿದ್ದುಪಡಿ) ಮಸೂದೆಯು ನಗರ ವಿಪತ್ತು ನಿರ್ವಹಣಾ ಪ್ರಾಧಿಕಾರಗಳನ್ನು ಪರಿಚಯಿಸುತ್ತದೆ. ಸ್ಥಳೀಯ ವ್ಯವಸ್ಥೆಗಳ ಮೇಲೆ ಕೇಂದ್ರೀಕರಿಸುತ್ತದೆ. ಭಾರತೀಯ ವಾಯುಯಾನ್ ವಿಧೇಯಕ್ (ವಿಮಾನ ಮಸೂದೆ) ಭಾರತವನ್ನು ಏರೋಸ್ಪೇಸ್ ಹಬ್ ಆಗಿಸುವ ಗುರಿ ಹೊಂದಿದೆ.