ಬೆಂಗಳೂರು : ಕಾಂಗ್ರೆಸ್ ನಾಯಕರ ಸಿಂಹಾಸನ ಸಮರ ಮತ್ತಷ್ಟು ಹೆಚ್ಚಾಗಿದೆ. ಡಿಕೆಶಿಗೆ ಕುರ್ಚಿ ಕೊಡಿಸಲು ನಿನ್ನೆ ರಾತ್ರಿ ಆರು ಜನ ಶಾಸಕರು ಕೆಐಎಎಲ್ನಿಂದ ರಾಷ್ಟ್ರ ರಾಜಧಾನಿ ದೆಹಲಿಗೆ ಪ್ರಯಾಣಿಸಿದ್ದಾರೆ.
ಮದ್ದೂರು ಶಾಸಕ ಉದಯ್ ಕದಲೂರು ನೇತೃತ್ವ ಡೆಲ್ಲಿಗೆ ಹೊರಟಿದ್ದಾರೆ. ಶಾಸಕರಾದ ಶರತ್ ಬಚ್ಚೇಗೌಡ, ನಯನ ಮೋಟಮ್ಮ, ಮಾಗಡಿ ಬಾಲಕೃಷ್ಣ, ಇಕ್ಬಾಲ್ ಹುಸೇನ್, ಹೈಕಮಾಂಡ್ ಲೀಡರ್ಸ್ ಭೇಟಿಗೆ ಶಾಸಕರು ಹೊರಡಿದರು.
ಸಚಿವ ಚಲವರಾಯಸ್ವಾಮಿ ನೇತೃತ್ವದಲ್ಲಿ ಕಳೆದ ವಾರವಷ್ಟೇ ದೆಹಲಿಗೆ 1 ಬಣ ಪ್ರಯಾಣಿಸಿತ್ತು. ಡೆಲ್ಲಿಯಲ್ಲೇ ಬೀಡು ಬಿಟ್ಟು, ಒಕ್ಕಲಿಗ ದಾಳ ಹಾಕಿ ಡಿಕೆಶಿಗೆ ಸಿಂಹಾಸನ ಕೊಡಿಸಲು ಮನವಿ ಮಾಡಿತ್ತು.ಇದೀಗ ಮತ್ತೊಂದು ಬಣ ತೆರಳಿದೆ.
ಇದನ್ನೂ ಓದಿ : ಹೆಚ್.ಡಿ ಕುಮಾರಸ್ವಾಮಿಯ ಅಪ್ಪಟ ಅಭಿಮಾನಿ ಆತ್ಮಹತ್ಯೆ | ಜೆಡಿಎಸ್ ನಾಯಕರಿಂದ ಸಂತಾಪ



















