ಗದಗ: ಒಂದೇ ದಿನದಲ್ಲಿ ಐವರು ಮಹಿಳೆಯರ ಕೊರಳಿನಲ್ಲಿದ್ದ ತಾಳಿಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ಬಸ್ ನಿಲ್ದಾಣದಲ್ಲಿ ನಡೆದಿದೆ. ಬಸ್ ನಿಲ್ದಾಣದಲ್ಲಿ ಬಸ್ ಹತ್ತುವಾಗ ಕಳ್ಳರು ಕೈಚಳಕ ತೋರಿದ್ದಾರೆ. ಕೀರ್ತನ ಕೊಡ್ಲಿ ಎಂಬ ಮಹಿಳೆ ಸೇರಿದಂತೆ ಐದು ಮಹಿಳೆಯರ ಚಿನ್ನದ ತಾಳಿ ಸರ ಕಳ್ಳತನವಾಗಿದ್ದು, ಅಕ್ಕಿಗುಂದ ಗ್ರಾಮಕ್ಕೆ ಹೋಗಲು ಬಸ್ ನಿಲ್ದಾಣಕ್ಕೆ ಬಂದಾಗ ಘಟನೆ ನಡೆದಿದೆ. ಕೊರಳಿನಲ್ಲಿ ತಾಳಿ ಇಲ್ಲದನ್ನು ಕಂಡು ಮಹಿಳೆಯರು ಕಂಗಲಾಗಿದ್ದಾರೆ.
ಬಸ್ ನಿಲ್ದಾಣದಲ್ಲಿ ಪೊಲೀಸ್ ಕಾವಲು ನಡುವೆಯೂ ಸರಗಳ್ಳತನವಾಗಿದ್ದು, ಲಕ್ಷ್ಮೇಶ್ವರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.