ಕಾಮಿಡಿ ಕಿಲಾಡಿ ರಿಯಾಲಿಟಿ ಶೋ ಮೂಲಕ ಎಲ್ಲರ ಮನೆಮಾತಾಗಿದ್ದ ಮಡೆನೂರು ಮನು ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿದ್ದರು. ಇದೀಗ ಬೇಲ್ ಪಡೆದು ಜೈಲಿನಿಂದ ಹೊರಬಂದಿದ್ದಾರೆ.
ಜೈಲಿನಿಂದ ಹೊರಬಂದ ನಂತರ ಬೇಸರ ಹೊರಹಾಕಿದ್ದಾರೆ. ಮನು ಜೈಲಿಗೆ ಹೋಗುವ ಮುನ್ನ ಕನ್ನಡದ ಖ್ಯಾತ ನಟರ ಬಗ್ಗೆ ಅಗೌರವ ತೋರಿ ಮಾತನಾಡಿರುವ ಬಗ್ಗೆ ಆಡಿಯೋ ವೈರಲಾಗಿತ್ತು. ಆ ಆಡಿಯೋ ಬಗ್ಗೆ ರಿಯಾಕ್ಟ್ ಮಾಡಿದ್ದಾರೆ. ಆ ಆಡಿಯೋ ನನ್ನದಲ್ಲ. ಅದನ್ನ ಕೇಳಿದರೆ ಮೈ ಉರಿದು ಹೋಗುತ್ತಿದೆ.
ಯಾರು ಈತರ ಮಾಡಿದರೋ ಗೊತ್ತಿಲ್ಲಾ? ‘ಆಡಿಯೋ ಮೂಲಕ ನನ್ನ ನಾಶ ಮಾಡಿದರು. ಹಲವು ವರ್ಷಗಳ ಕಾಲ ಜೂನಿಯರ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದೇನೆ. ನನ್ನ ಕನಸು ಈಡೇರುವಾಗ ಈ ರೀತಿ ಆಯಿತು. ಈ ಪರಿಸ್ಥಿತಿ ಯಾವ ಶತ್ರುವಿಗೂ ಬರಬಾರದು. ಕೆಲವರು ನನ್ನ ಬಗ್ಗೆ ಒಳ್ಳೆ ಅಭಿಪ್ರಾಯ ಇಟ್ಟಿದ್ದಾರೆ. ಇನ್ನು ಕೆಲವರು ನನ್ನ ಭವಿಷ್ಯವನ್ನೇ ಹಾಳು ಮಾಡಲು ನಿಂತಿದ್ದಾರೆ. ಆದರೆ, ಎಲ್ಲರಿಗೂ ಕೂಡ ಒಳ್ಳೆದಾಗಲಿ ಎಂದಿದ್ದಾರೆ.