ಬೆಂಗಳೂರು: ಉಗ್ರರು ಇಡೀ ಭಾರತವನ್ನು ಹೆದರಿಸಲು ಯತ್ನಿಸಿದ್ದಾರೆಂದು ಜನಾರ್ದನ ರೆಡ್ಡಿ ಗುಡುಗಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಗ್ರರ ಈ ಕೃತ್ಯದಿಂದಾಗಿ ಮೂವತ್ತು ಮಂದಿ ಸಾವನ್ನಪ್ಪಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಅಂತ ಪ್ರಾರ್ಥಿಸುತ್ತೇನೆ. 370 ತೆಗೆದ ನಂತರ ನಾನು ಮತ್ತು ನನ್ನ ಪತ್ನಿ ಹೋಗಿದ್ದೇವು. ಅಲ್ಲಿ ಕುದುರೆ ಸವಾರಿ ಮಾಡಿ ಒಂದು ದಿನ ಕಳೆದಿದ್ದೇವು. ಇತ್ತೀಚೆಗೆ ಅಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿತ್ತು. ಅದನ್ನು ಸಹಿಸಲಾಗದೆ ಈ ರೀತಿ ಮಾಡಿದ್ದಾರೆ.
ಆದರೆ, ಮೋದಿ ಉಗ್ರರಿಗೆ ತಕ್ಕ ಪಾಠ ಕಲಿಸುತ್ತಾರೆ. ಸಿಎಂ ಹಾಗೂ ಖರ್ಗೆಯವರು ಪ್ರವಾಸಿಗರ ಟಾರ್ಗೆಟ್ ಮಾಡಿದ್ದಾರೆ ಅಂತಾ ಹೇಳಿ ರಾಜಕೀಯ ಮಾತುಗಳನ್ನಾಡಿದ್ದಾರೆ. ಆದರೆ, ಈ ಸಂದರ್ಭದಲ್ಲಿ ವಿರೋಧ ಪಕ್ಷಗಳು ಪ್ರಧಾನಿ ಮೋದಿ ಅವರ ಕೈ ಬಲಪಡಿಸಬೇಕೇ ವಿನಃ ಈ ರೀತಿ ಮಾತನಾಡಬಾರದು ಎಂದಿದ್ದಾರೆ.