ಚಿಕ್ಕೋಡಿ: ಸರ್ಕಾರಿ ಶಾಲಾ ಕೊಠಡಿಗಾಗಿ ಪ್ರತಿಭಟನೆ ಮಾಡಿದ್ದ ಶಿಕ್ಷಕನ ಅಮಾನತ್ತು ವಿಚಾರವಾಗಿ, ನಿಡಗುಂದಿ ಗ್ರಾಮಸ್ಥರು ಹಾಗೂ ಶಾಲಾ ಮಕ್ಕಳು ಪ್ರತಿಭಟನೆ ನಡೆಸಿದ್ದಾರೆ.
ಈ ಹಿಂದೆ ಶಾಲಾ ಕೊಠಡಿಯ ಮಂಜೂರಾತಿಗೆ ಆಗ್ರಹಿಸಿ ಇಲಾಖೆ ವಿರುದ್ದ ವೀರಣ್ಣ ಮಡಿವಾಳ ಎಂಬ ಶಿಕ್ಷಕರು ಪ್ರತಿಭಟನೆ ನಡೆಸಿದ್ದರು. ಇಲಾಖೆಯಲ್ಲಿ ಅಶಿಸ್ತು ತೋರಿದ ಹಿನ್ನಲೆ ಕ್ಷೇತ್ರ ಶಿಕ್ಷಣಾಧಿಕಾರಿಯನ್ನು ಅಮಾನತ್ತು ಮಾಡಲಾಗಿತ್ತು.
ಅಮಾನತನ್ನು ಖಂಡಿಸಿ ನಮಗೆ ಆ ಶಿಕ್ಷಕರು ವಾಪಾಸ್ ಬೇಕೆಂದು ಪ್ರೊಟೆಸ್ಟ್ ಮಾಡಿದ್ದು, ಮಡಿವಾಳರು ಬರುವವರೆಗೂ ನಾವು ಕೊಠಡಿ ಒಳಗೆ ಹೊಗಲ್ಲ. ಊಟ ಮಾಡಲ್ಲ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ.