ತಿರುಪತಿಯಲ್ಲಿ ಬುಧವಾರ ನಡೆದ ಕಾಲ್ತುಳಿತದಲ್ಲಿ ಮೃತಪಟ್ಟವರಲ್ಲಿ (Tirupati tragedy) ಕರ್ನಾಟಕದವರು ಇಲ್ಲ ಎಂಬುದಾಗಿ ಮಾಹಿತಿ ಬಂದಿದೆ. ಆರಂಭದಲ್ಲಿ ಬಳ್ಳಾರಿಯ (Bellary)ಮಹಿಳೆಯೊಬ್ಬರು ಇದ್ದಾರೆ ಎಂದು ಹೇಳಲಾಗಿತ್ತು. ಆದರೆ ಅವರು ಇಲ್ಲ
ತಿರುಪತಿಯ ಬೈರಾಗಿಪಟ್ಟೇಡಾದಲ್ಲಿ ವೈಕುಂಠ ದರ್ಶನದ ಟೋಕನ್ ನೀಡಲು ಸಿದ್ಧಪಡಿಸಿದ್ದ ಕೌಂಟರ್ನಲ್ಲಿ ಕಾಲ್ತುಳಿತಕ್ಕೆ(stampede) ಆರು ಜನರು ಮೃತಪಟ್ಟಿದಾರೆ. ಇನ್ನೂ 44 ಜನರು ಗಾಯಗೊಂಡಿದ್ದಾರೆ ಎಂದು ಗುರುವಾರ ಮೂಲಗಳು ತಿಳಸಿವೆ. ಘಟನೆಯಿಂದ ತಿರುಪತಿ (Tirupati) ನಗರವೇ ಬೆಚ್ಚಿಬಿದ್ದಿದೆ. ಇಂತಹ ದುರಂತ ಘಟನೆ ನಡೆದಿರುವುದು ಇದೇ ಮೊದಲು ಎಂದು ಹೇಳಲಾಗಿದೆ.

ಮೃತಪಟ್ಟವರ ವಿವರ ಇಲ್ಲಿದೆ
- ಲಾವಣ್ಯಸ್ವಾತಿ, ತತಿಚೆಟ್ಲಪಲೆಮ್, ವಿಶಾಖಪಟ್ಟಣಂ
- ಶಾಂತಿ, ಕಂಚರಪಲೆಮ್, ವಿಶಾಖಪಟ್ಟಣಂ
- ಬಾಬು ನಾಯ್ಡು ರಾಮಚಂದ್ರಪುರಂ (ವೈಜಾಗ್)
- ರಜನಿ ಮಡ್ಡಿಲಪಲೆಮ್, ವಿಶಾಖಪಟ್ಟಣಂ
- ನಿರ್ಮಲಾ, ಪೊಲ್ಲಾಚಿ ತಮಿಳುನಾಡು
- ಮಲ್ಲಿಕಾ, ಸೇಲಂ, ಮೆಟ್ಟೂರು, ತಮಿಳುನಾಡು
ನಿರ್ಮಲಾ ಮತ್ತು ರಜನಿ ಅವರ ಮೃತದೇಹಗಳನ್ನು ತಿರುಪತಿಯ ಎಸ್ ವಿಐಎಂಎಸ್ (SVIMS)ಆಸ್ಪತ್ರೆಯಲ್ಲಿ ಇಡಲಾಗಿದೆ. ಉಳಿದ ನಾಲ್ವರ ಶವಗಳನ್ನು (corpse)ತಿರುಪತಿ ರುಯಾ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಟಿಕೆಟ್ ಗಾಗಿ ಕಾಲ್ತುಳಿತದಲ್ಲಿ ಗಾಯಗೊಂಡವರಲ್ಲಿ 31 ಮಂದಿ ರುಯಾ ಆಸ್ಪತ್ರೆಯಲ್ಲಿ ಮತ್ತು 13 ಮಂದಿ ಎಸ್ ವಿಐಎಂಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ (Treatment)ಪಡೆಯುತ್ತಿದ್ದಾರೆ.
ಉಸಿರಾಟದ ಸಮಸ್ಯೆಯಿಂದ ಸಾವು(Death)
ಮೇ 10, 11 ಮತ್ತು 12 ರ ಮೂರು ದಿನಗಳ ಕಾಲ ತಿರುಮಲದಲ್ಲಿ ವೈಕುಂಠ ದರ್ಶನದ ಮೂರು ದಿನಗಳ ಸರ್ವದರ್ಶನಂ ಟೋಕನ್ಗಳನ್ನು ನೀಡಲು ಟಿಟಿಡಿ ತಿರುಪತಿಯ ಎಂಟು ಸ್ಥಳಗಳಲ್ಲಿ 90 ಕೌಂಟರ್ಗಳನ್ನು ಸ್ಥಾಪಿಸಲಾಗಿದೆ. ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರಿಗೆ ಉಸಿರುಗಟ್ಟಿದ್ದೇ ಘಟನೆ ಮೂಲ ಕಾರಣ. ತಿರುಪತಿಯ ವಿಷ್ಣು ನಿವಾಸ್, ಬೈರಾಗಿಪಟ್ಟಡ ಮತ್ತು ಭೂದೇವಿ ಕಾಂಪ್ಲೆಕ್ಸ್ನಲ್ಲಿ ಬುಧವಾರ (Wednsday) ರಾತ್ರಿ ಕಾಲ್ತುಳಿತ ಸಂಭವಿಸಿದೆ. ಬೈರಾಗಿಪಟ್ಟೇಡಾದಲ್ಲಿನಡೆದ ಘಟನೆಯಲ್ಲಿಯೇ ಹೆಚ್ಚಿನ ಜೀವ ಹಾನಿಯಾಗಿದೆ.
ಗುರುವಾರ ಬೆಳಿಗ್ಗೆ 5 ಗಂಟೆಯಿಂದ ಟೋಕನ್ (token)ವಿತರಣೆಗೆ ಸಮಯ ನಿಗದಿಯಾಗಿತ್ತು. ಹೀಗಾಗಿ ಬುಧವಾರ ಮಧ್ಯಾಹ್ನದಿಂದ ಹೆಚ್ಚಿನ ಸಂಖ್ಯೆಯ ಜನರು ಕೌಂಟರ್ಗಳಿಗೆ ಬಂದಿದ್ದರು. ಪೊಲೀಸರು ಅವರನ್ನು ಹೊರಗೆ ರಸ್ತೆಯಲ್ಲಿ ಸರತಿ ಸಾಲಿನಲ್ಲಿ ಪ್ರವೇಶಿಸದಂತೆ ತಡೆದರು ಮತ್ತು ನಂತರ ರಾತ್ರಿ 9 ಗಂಟೆ ಸುಮಾರಿಗೆ ಕಾಲ್ತುಳಿತ ಉಂಟಾಯಿತು.
ಇನ್ನೇನು ಆಯಿತು? - ತಿರುಪತಿ ರೈಲ್ವೆ ನಿಲ್ದಾಣದ ಮುಂಭಾಗದ ವಿಷ್ಣು ನಿವಾಸದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಕೆಲವರು ಗಾಯಗೊಂಡಿದ್ದಾರೆ.
- ಬೈರಾಗಿಪಟ್ಟೇಡ ಪ್ರದೇಶದ ರಾಮಾನಾಯ್ಡು ಶಾಲೆಯಲ್ಲಿ ಸ್ಥಾಪಿಸಲಾದ ಕೌಂಟರ್ಗಳಲ್ಲಿ ಗೇಟ್ ತೆರೆಯುವಾಗ ಉಂಟಾದ ಗಲಾಟೆಯಲ್ಲಿ ಸುಮಾರು ಒಂಬತ್ತು ಭಕ್ತರು ಉಸಿರುಗಟ್ಟಿ ತೀವ್ರವಾಗಿ ಅಸ್ವಸ್ಥರಾದರು.
- ಅಲಿಪಿರಿಯ ಭೂದೇವಿ ಕಾಂಪ್ಲೆಕ್ಸ್ನಲ್ಲಿ ಕೆಲವು ಭಕ್ತರು ಜಗಳವಾಡಿಕೊಂಡಿದ್ದಾರೆ ಮತ್ತು ಗಂಭೀರ ಗಾಯಗೊಂಡರು.
ಆಸ್ಪತ್ರೆಯಲ್ಲಿ ಇನ್ನೂ ಚಿಕಿತ್ಸೆ ಪಡೆಯುತ್ತಿರುವವರ ವಿವರಗಳನ್ನು ಆಸ್ಪತ್ರೆಯ ಮೂಲಗಳು ಇನ್ನೂ ಬಹಿರಂಗಪಡಿಸಿಲ್ಲ.
ವೈದ್ಯಕೀಯ ಸೇವೆ ವಿಳಂಬ
ಕಾಲ್ತುಳಿತದಲ್ಲಿ ಗಾಯಗೊಂಡವರಿಗೆ ಸಿಪಿಆರ್ ನಡೆಸಿದ ಟಿಟಿಡಿ ಭದ್ರತಾ ಸಿಬ್ಬಂದಿ ರಾತ್ರಿ 9.30 ರ ಸುಮಾರಿಗೆ ರುಯಾ ಆಸ್ಪತ್ರೆಗೆ ಕರೆದೊಯ್ದರು. ಈ ವೇಳೆ ವೈದ್ಯರುಗಳು ಕರ್ತವ್ಯ ಬದಲಾಯಿಸುವ ಸಮಯವಾಗಿತ್ತು. ವೈದ್ಯರು ಕರ್ತವ್ಯಕ್ಕೆ ಹಾಜರಾಗಲು ವಿಳಂಬವಾಗಿದ್ದರಿಂದ ಹೆಚ್ಚಿನ ಅನಾಹುತ ನಡೆದಿದೆ.
ಗುಪ್ತಚರ ವೈಫಲ್ಯ: ಟಿಟಿಡಿ ಅಧ್ಯಕ್ಷ
ಈ ಘಟನೆ ನಡೆದಿರುವುದು ತುಂಬಾ ದುಃಖಕರ. ಟಿಟಿಡಿ ಅಧ್ಯಕ್ಷ ಬಿ. ಆರ್ ನಾಯ್ಡು (B.R.Naidu)ಬುಧವಾರ ರಾತ್ರಿ ತಿರುಪತಿ ಆಸ್ಪತ್ರೆಗೆ ತೆರಳಿ ಸಂತ್ರಸ್ತರನ್ನು ಭೇಟಿಯಾದರು. ಅಲ್ಲಿ ಅವರು ಗುಪ್ತಚರ ವಿಭಾಗದ ವೈಫಲ್ಯ ಕಂಡು ಬಂದಿದೆ ಎಂದು ಆರೋಪಿಸಿದರು.