ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಕೇಸ್ ದಾಖಲಾಗಿದೆ.
ಗಾಯಾಳು ನೀಡಿದ ದೂರಿನ ಮೇರೆಗೆ ಕೇಸ್ ದಾಖಲಿಸಿಕೊಳ್ಳಲಾಗಿದೆ. ಆರ್ ಸಿ ಬಿ ಪ್ರಾಂಚೈಸಿ, ಕೆಎಸ್ ಸಿಎ ಮತ್ತು ಡಿಎನ್ಎ ಕಂಪನಿ ವಿರುದ್ದ ದೂರು ದಾಖಲಾಗಿದೆ. ರೋಲನ್ ಗೊಮೆಸ್ ಎಂಬಾತ ನೀಡಿದ ದೂರಿನ ಅನ್ವಯ ಕೇಸ್ ದಾಖಲಾಗಿದೆ.
ತಾನು ಸಾಮಾಜಿಕ ಜಾಲತಾಣದಲ್ಲಿ ಆರ್ ಸಿಬಿ ಪೋಸ್ಟ್ ನೋಡಿ ತನ್ನ ಗೆಳೆಯರ ಜೊತೆ ಬಂದೆ. ಟಿಕೆಟ್ ನ್ನು ಅಲ್ಲಿಯೇ ನೀಡಲಾಗುತ್ತೆ. ಟಿಕೆಟ್ ಇಲ್ಲದಿದ್ದರೂ ಒಳಗೆ ಬಿಡಲಾಗುತ್ತದೆ ಎಂದು ಅದರಲ್ಲಿತ್ತು. ತೆರದ ಬಸ್ ಮೂಲಕ ಮೆರವಣಿಗೆ ಇದೆ ಎಂದು ತಿಳಿಸಲಾಗಿತ್ತು. ಈ ವೇಳೆ ಗೇಟ್ ನಂಬರ್ ಹದಿನೇಳರಲ್ಲಿ ತಾನು ಹೋಗುವಾಗ ನೂಕು ನುಗ್ಗಲು ಉಂಟಾಯಿತು. ಈ ಘಟನೆಯಲ್ಲಿ ನನ್ನ ಬಲ ತೋಳಿನ ಜಾಯಿಂಟ್ ಕಟ್ ಆಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೇನೆ ಎಂದು ದೂರು ನೀಡಿದ್ದಾರೆ.