ಶಿವಮೊಗ್ಗ: ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಗೆ ಕನ್ನಡಿಗರು ಸಾವನ್ನಪ್ಪಿದ್ದಾರೆ ಈ ವಿಚಾರಕ್ಕೆ ಸಂಭಂಧಪಟ್ಟಂತೆ ಶಿವಮೊಗ್ಗದಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದ್ದಾರೆ.
ನನ್ನ ಕ್ಷೇತ್ರದಲ್ಲಿ ಬೇರೆ ಬೇರೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಇಲ್ಲಿಗೆ ಬಂದಿದ್ದೇನೆ. ಧರ್ಮದ ಆಧಾರದಲ್ಲಿ ಹತ್ಯೆ ಮಾಡುವುದನ್ನು ಪ್ರತಿಯೊಬ್ಬರು ಖಂಡಿಸಬೇಕು. ಕೇವಲ ಹಿಂದೂಗಳು ಮಾತ್ರವಲ್ಲ.. ಚರ್ಚ್ ನ ಫಾದರ್ ಗಳು., ಮಸೀದೀಯ ಮೌಲ್ವಿಗಳು ಸೇರಿದಂತೆ ಎಲ್ಲರೂ ಖಂಡಿಸಬೇಕು ಎಂದಿದ್ದಾರೆ.
ಧರ್ಮದ ಆಧಾರದ ಮೇಲಿನ ದಾಳಿಯನ್ನು ಪ್ರತಿಯೊಬ್ಬ ಭಾರತೀಯರೂ ಖಂಡಿಸಿದ್ದಾರೆ. ಆದರೆ, ನಮ್ಮ ರಾಜ್ಯದ ಸಿಎಂ ಇದನ್ನ ಖಂಡಿಸುವ ಕೆಲಸ ಮಾಡಿಲ್ಲ. ಸಿದ್ದರಾಮಯ್ಯನವರಿಗೆ ಗೃಹ ಸಚಿವರು ಸಾಥ್ ನೀಡಿದ್ದಾರೆ. ಪರಮೇಶ್ವರ್ ಸಾತ್ವಿಕರು ಅಂದುಕೊಂಡಿದ್ದೆ. ಆದರೆ, ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ಕಾಂಗ್ರೆಸ್ ನಾಯಕರ ಹೆಸರುಗಳನ್ನು ನೋಡಿ ಸಿದ್ದರಾಮ, ಶಿವಕುಮಾರ್, ಪರಮೇಶ್ವರ್ ಅಂತ ಇವೆ. ಆದರೆ, ಅವರು ಯಾರು ಕೂಡ ಹಾಗೇ ಇಲ್ಲ. ಎಲ್ಲರೂ ಭಯೋತ್ಪಾದಕರ ಪರವಾಗಿ ಮಾತಾಡ್ತಾರೆ. ನಾವು ಇವರನ್ನೇ ಭಯೋತ್ಪಾದಕರು ಎನ್ನಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಸಿದ್ದರಾಮಯ್ಯ ಹೇಳಿಕೆಯನ್ನ ಪಾಕಿಸ್ತಾನದ ಮಾಧ್ಯಮಗಳು ವೈಭವೀಕರಿಸಿವೆ. ಅವರ ಪರ ಮಾತನಾಡಿದವರಿಗೆ ಪಾಕಿಸ್ತಾನದ ಪ್ರಶಸ್ತಿ ಬರುತ್ತದೆಯೇ? ಸಿಎಂ ಸಿದ್ದರಾಮಯ್ಯನವರು ಯೋಧರ ಆತ್ಮಸ್ಥೈರ್ಯ ಕುಗ್ಗಿಸುತ್ತಿದ್ದಾರೆ. ಸಿದ್ಧರಾಮಯ್ಯನವರೇ ನೀವು ಅಧಿಕಾರದಲ್ಲಿ ಇರೋಕೆ ನಾಲಾಯಕ್, ಕೂಡಲೇ ಸಿಎಂ ಹುದ್ದೆಗೆ ರಾಜಿನಾಮೆ ನೀಡಿ ಎಂದು ವಾಗ್ಧಾಳಿ ನಡೆಸಿದ್ದಾರೆ.