ನಟಿ ರಚಿತಾ ರಾಮ್ (Rachita Ram) ವಿರುದ್ಧ ಗಂಭೀರ ಆರೋಪವೊಂದು ಕೇಳಿ ಬಂದಿದೆ.
ಚಿತ್ರದಲ್ಲಿ ನಟಿಸಿದರೂ ನಟಿ ರಚಿತಾ ರಾಮ್ ಪ್ರಚಾರದಲ್ಲಿ ಭಾಗವಹಿಸದೆ ತಂಡಕ್ಕೆ ಹಿನ್ನಡೆ ಆಗುವಂತೆ ಮಾಡುತ್ತಿದ್ದಾರೆಂದು ಸಂಜು ವೆಡ್ಸ್ ಗೀತಾ 2 ಚಿತ್ರದ ನಿರ್ದೇಶಕ ನಾಗಶೇಖರ್ ಹಾಗೂ ನಟ ಶ್ರೀನಗರ ಕಿಟ್ಟಿ ಇಂದು ಫಿಲ್ಮ್ ಚೇಂದರ್ ಗೆ ದೂರು ಸಲ್ಲಿಸಿದ್ದಾರೆ.
ಈ ಚಿತ್ರದಲ್ಲಿ ರಚಿತಾ ರಾಮ್ ನಾಯಕಿಯಾಗಿ ನಟಿಸಿದ್ದಾರೆ. ಆದರೆ, ಸಿನಿಮಾ ಬಿಡುಗಡೆಗೂ ಮುನ್ನ ಹಾಗೂ ನಂತರ ರಚಿತಾ ಭಾಗಿಯಾಗಿಲ್ಲ. ಹೀಗಾಗಿ ನಟಿಯ ನಡೆಯ ವಿರುದ್ಧ ಫಿಲ್ಮ್ ಚೇಂಬರ್ ಕ್ರಮ ಕೈಗೊಳ್ಳಬೇಕು. ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮನವೊಲಿಸಲು ಪ್ರಯತ್ನಿಸಿದರೂ ಒಪ್ಪಿಲ್ಲ. ಹಿಂದೆ ಖ್ಯಾತ ನಟಿಯರೊಂದಿಗೆ ಕೆಲಸ ಮಾಡಿದ್ದೇನೆ. ಆದರೆ ಯಾರೂ ಹೀಗೆ ಮಾಡಿಲ್ಲ ಎಂದು ಆರೋಪಿಸಿದ್ದಾರೆ.
ಛಲವಾದಿ ಕುಮಾರ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ರಾಗಿಣಿ ದ್ವಿವೇದಿ ಸೇರಿದಂತೆ ಹಲವು ಕಲಾವಿದರು ತಾರಾ ಬಳಗದಲ್ಲಿದ್ದಾರೆ.
ಯಾವುದೋ ಕಾರಣಕ್ಕೆ ನಟಿ ಹಾಗೂ ಚಿತ್ರ ತಂಡದ ಮಧ್ಯೆ ಕಿರಿಕ್ ಆಗಿದೆ. ಈ ಹಿನ್ನೆಲೆಯಲ್ಲಿ ನಟಿ ಚಿತ್ರದ ಪ್ರಚಾರಕ್ಕೆ ಭಾಗವಹಿಸುತ್ತಿಲ್ಲ. ಆದರೆ, ಎಷ್ಟೇ ಮನವೊಲಿಸಿದರೂ ನಟಿ ಮಾತ್ರ ಪ್ರಚಾರಕ್ಕೆ ಬರುತ್ತಿಲ್ಲ. ಇದು ಅಭಿಮಾನಿಗಳ ಹಾಗೂ ಸಿನಿರಸಿಕರ ಆಶ್ಚರ್ಯ ಹಾಗೂ ಸಂಶಯಕ್ಕೆ ಕಾರಣವಾಗಿದೆ.
ಈ ಲೋಪ ಸರಿಪಡಿಸಿಕೊಂಡು ಚಿತ್ರದ ಯಶಸ್ಸಿಗಾಗಿ ಚಿತ್ರ ತಂಡ ಯತ್ನಿಸುತ್ತಿದೆ. ಆದರೆ, ಇದಕ್ಕೆ ನಟಿ ಮಾತ್ರ ಸೊಪ್ಪು ಹಾಕುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಫಿಲ್ಮ್ ಚೇಂಬರ್ ಗೆ ಭೇಟಿ ನೀಡಿರುವ ಚಿತ್ರ ತಂಡದ ಪ್ರಮುಖರು ದೂರು ಸಲ್ಲಿಸಿದ್ದಾರೆ. ಇಂತಹ ನಟಿಯ ವಿರುದ್ಧ ಕ್ರಮ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಈ ಮನಸ್ಥಿತಿಯವರನ್ನು ಶಿಕ್ಷಿಸದೆ ಇರಬಾರದು. ಏಕೆಂದರೆ ನಿರ್ಮಾಪಕರು ನಂಬಿ ಬಂಡವಾಳ ಹಾಕಿರುತ್ತಾರೆ. ಇಂಥವರ ಕೆಲವು ಧೋರಣೆಯಿಂದಾಗಿ ಚಿತ್ರ ತಂಡ ಸೋಲುವಂತಾಗುತ್ತದೆ. ಇದರಿಂದ ಕಥೆ ಹಾಗೂ ಶ್ರಮ ಉತ್ತಮವಾಗಿದ್ದರೂ ಚಿತ್ರ ಸೋತರೆ ನೋವಾಗುತ್ತದೆ. ಹೀಗಾಗಿ ನಟಿ ರಚಿತಾ ರಾಮ್ ವಿರುದ್ಧ ಕ್ರಮ ಕೈಗೊಳ್ಳಬೇಕು. ಚಿತ್ರದಲ್ಲಿ ನಟಿಸಿದರೂ ಪ್ರಚಾರ ಕಾರ್ಯದಿಂದ ಅವರು ದೂರವಾಗುತ್ತಿರುವುದು ನೋವಿನ ಸಂಗತಿ ಎಂದು ನಿರ್ದೇಶಕರು ಹಾಗೂ ನಾಯಕ ನಟ ಆರೋಪಿಸಿದ್ದಾರೆ.