ಹುಬ್ಬಳ್ಳಿ : ಲೇಖಕಿ ಶಶಿಕಲಾ ವೀರಭದ್ರಯ್ಯ ಚಿಕ್ಕಮಠ ಅವರು ಬರೆದ ‘ಚಿತ್ಕಳೆಯ ಬೆಳಗು’ ಕೃತಿಯನ್ನು ಇತ್ತೀಚೆಗೆ ನಗರದಲ್ಲಿ ಜರುಗಿದ ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು.
ಕೃತಿ ಬಿಡುಗಡೆ ಮಾಡಿದ ಕನ್ನಡದ ಹಿರಿಯ ವಿದ್ವಾಂಸ, ಭಾಷಾವಿಜ್ಞಾನಿ ಪ್ರೊ. ಸಂಗಮೇಶ ಸವದತ್ತಿಮಠ ಅವರು, ಹೃದ್ಯವಾದ ಸರಳ ಸುಂದರ ಬರವಣಿಗೆಯನ್ನು ರೂಢಿಸಿಕೊಂಡಿರುವ ಶಶಿಕಲಾ ಚಿಕ್ಕಮಠ ಅವರು ತಮ್ಮ ಬದುಕಿನ ವಿಭಿನ್ನ ಮಜಲುಗಳನ್ನು ಕೇಂದ್ರೀಕರಿಸಿ ಜೀವನ ವಿಧಾನದ ಅನೇಕ ವಿಶಿಷ್ಟ ಅನುಭವಗಳನ್ನು ಈ ಕೃತಿಯಲ್ಲಿ ಸೊಗಸಾಗಿ ಹಂಚಿಕೊಂಡಿದ್ದಾರೆ ಎಂದರು.
ಅಖಿಲ ಕರ್ನಾಟಕ ವೀರಶೈವ ಜಂಗಮ ಸಮಾಜದ ಹಿರಿಯರಾದ ಸಿದ್ಧಯ್ಯ ಹಿರೇಮಠ, ಭೂದೇವಿ ಕಾಡಯ್ಯ ಹಿರೇಮಠ, ಚೆನ್ನಯ್ಯ ಘಂಟಿ, ವೀರಭದ್ರಯ್ಯ ಚಿಕ್ಕಮಠ, ಶಕುಂತಲಾ ಸವದತ್ತಿಮಠ, ರವಿಶಂಕರ ಚಿಕ್ಕಮಠ, ಬಸವರಾಜ ವಸ್ತçದ, ಉಮೇಶ ಚಿಕ್ಕಮಠ, ಶಿಲ್ಪಾ ಹಿರೇಮಠ, ಶಶಿಕಲಾ ಶಾಸ್ತ್ರೀಮಠ, ಚಂದ್ರಿಕಾ ವಸ್ತ್ರದ, ರೋಹಿಣಿ ಚಿಕ್ಕಮಠ, ಶೋಭಾ ಅಡಗಿಮಠ, ಸುನೀತಾ ಹಿರೇಮಠ, ವಿದ್ಯಾ ಸೀಮಿಮಠ ವೇದಿಕೆಯಲ್ಲಿದ್ದರು.
ಅಭಿನಂದನೆ : ಇದೇ ಸಂದರ್ಭದಲ್ಲಿ ತಮ್ಮ ವಿವಾಹ ಸುವರ್ಣ ಸಂಭ್ರಮದಲ್ಲಿರುವ ವೀರಭದ್ರಯ್ಯ ಚಿಕ್ಕಮಠ ಹಾಗೂ ಶಶಿಕಲಾ ಚಿಕ್ಕಮಠ ಅವರನ್ನು ಗೌರವಿಸಿ ಅಭಿನಂದಿಸಲಾಯಿತು. ಅಭಿನಂದನಾ ಸಮಿತಿಯ ಪದಾಧಿಕಾರಿಗಳಾದ ಸಹಾಯಕ ಕೃಷಿ ನಿರ್ದೇಶಕಿ ಶೈಲಜಾ ಬೆಳ್ಳಂಕಿಮಠ, ವಿಶ್ರಾಂತ ಸಂಪಾದಕ ಗುರುಮೂರ್ತಿ ಯರಗಂಬಳಿಮಠ, ಲೇಖಕ ವೀರಣ್ಣ ಹೂಲಿ, ಶಿವಾನಂದ ಅದೃಶ್ಯಪ್ಪನವರ, ಮುಖ್ಯಾಧ್ಯಾಪಕಿ ದಾಕ್ಷಾಯಣಿ ಹಿರೇಮಠ, ಶಕುಂತಲಾ ತಳವಾರ, ಲೀಲಾ ಪಾಟೀಲ, ಶಿಕ್ಷಕಿ ಮಂಗಳಗೌರಿ ಮುಳಗುಂದಮಠ, ರತ್ನಾ ಮಹಾಬಲಶೆಟ್ಟಿ, ಮಾಲಾ ಬೆಟದೂರ, ಜಯಶ್ರೀ ಹಿರೇಮಠ, ಅಕ್ಕಮ್ಮ ಕೌದಿ, ಪ್ರೇಮಲತಾ ಪಾಟೀಲ, ನಿಖಿಲಾ ನೂರೊಂದೇವರಮಠ ಇತರರು ಇದ್ದರು.