ಬೆಂಗಳೂರು: ಚಂದನವನದ ನೂತನ ಚಿತ್ರ ಕುಲದಲ್ಲಿ ಕೀಳ್ಯಾವುದೋ ಚಿತ್ರದ ಪೋಸ್ಟರ್ ನ್ನು ಪವಿತ್ರ ತ್ರಿವೇಣಿ ಸಂಗಮದಲ್ಲಿ ಮಿಂದೇಳಿಸಲಾಗಿದೆ. ಈ ಮೂಲಕ ಚಿತ್ರದ ಯಶಸ್ಸಿರೆ ದೇವರಲ್ಲಿ ಪ್ರಾರ್ಥಿಸಲಾಗಿದೆ.ಕೆ. ರಾಮ್ ನಾರಾಯಣ್ ನಿರ್ದೇಶನದ, ಯೋಗರಾಜ್ ಭಟ್ ಅವರ ಕಥೆ ಹೊಂದಿರುವ ಕುಲದಲ್ಲಿ ಕೀಳ್ಯಾವುದೋ ಚಿತ್ರ ತಂಡ ಈಗ ಪ್ರಯಾಗ್ ರಾಜ್ ಗೆ ಹೋಗಿ ಸಾಧುಗಳ ಆಶೀರ್ವಾದ ಪಡೆಯುತ್ತಿದೆ.
ಸಂತೋಷ್ ಕುಮಾರ್ ಮತ್ತು ವಿದ್ಯಾ ನಿರ್ಮಾಣದ, ಮಡೆನೂರು ಮನು ಹಾಗೂ ಮೌನ ಗುಡ್ಡೆಮನೆ ನಾಯಕ, ನಾಯಕಿಯಾಗಿ ನಟಿಸುತ್ತಿರುವ “ಕುಲದಲ್ಲಿ ಕೀಳ್ಯಾವುದೋ” ಚಿತ್ರಕ್ಕಾಗಿ ಯೋಗರಾಜ್ ಭಟ್ ಸಾಹಿತ್ಯ ಕೂಡ ಇದೆ. ಮನೋಮೂರ್ತಿ ಸಂಗೀತ ನೀಡಿದ್ದಾರೆ.
ಈಗಾಗಲೇ ಚಿತ್ರದ ಒಂದು ಹಾಡು ಬಿಡುಗಡೆಯಾಗಿದೆ. ಅಂತೋನಿ ದಾಸ್ ಹಾಡಿರುವ “ನಮ್ ಪೈಕಿ ಒಬ್ಬ ಹೋಗ್ಬುಟ” ಹಾಡು ಟ್ರೆಂಡಿಂಗ್ ನಲ್ಲಿದ್ದು, ಜನ ಮೆಚ್ಚಿಕೊಳ್ಳುತ್ತಿದ್ದಾರೆ.
ಇತ್ತೀಚೆಗಷ್ಟೇ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಚಿತ್ರದ ನಾಯಕ ಮಡೆನೂರ್ ಮನು ಭೇಟಿ ನೀಡಿದ್ದರು. ಅಲ್ಲೂ ಸಹ ಈ ಹಾಡನ್ನು ಕೇಳಿದ ಜನರು ಮೆಚ್ಚುಗೆ ವ್ಯಕ್ತ ಪಡಿಸಿದರು. ಚಿತ್ರದ ಪೋಸ್ಟರ್ ಹಿಡಿದು ಮನು ಸಂಗಮದಲ್ಲಿ ಮುಳುಗಿ ಚಿತ್ರ ಯಶಸ್ವಿಯಾಗಲೆಂದು ಕ್ಷೇತ್ರ ದೇವತೆಯನ್ನು ಪ್ರಾರ್ಥಿಸಿದರು. ನಾಗಾಸಾಧುಗಳ ಆಶೀರ್ವಾದವನ್ನು ಸಹ ಪಡೆದುಕೊಂಡರು.