ನರೇಗಾ ಬಿಲ್ ಬಾರದಿದ್ದಕ್ಕೆ ಜಾತ್ರಿಯಲ್ಲಿ ಮೂವರು ಯುವಕರು ಮಹಿಳೆಯ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಹೂವಿನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬೀರೂರು ಹೋಬಳಿಯ ಹೂವಿನಹಳ್ಳಿಯಲ್ಲಿ ನರೇಗಾದಡಿ ಮಲ್ಲಿಕಾರ್ಜುನ್ ಕೆಲಸ ಮಾಡಿದ್ದ. ಕೆಲಸಗಾರರಿಂದ ಮಾಡಿಸಬೇಕಿದ್ದ ಕೆಲಸವನ್ನು ಮಲ್ಲಿಕಾರ್ಜುನ್ ಜೆಸಿಬಿಯಲ್ಲಿ ಮಾಡಿಸಿದ್ದ ಎನ್ನಲಾಗಿದೆ.
ಗ್ರಾಮದ ಶಶಿಧರ್ ಎಂಬ ಯುವಕ ಜೆಸಿಬಿ ಕೆಲಸದ ಫೋಟೋ-ವಿಡಿಯೋ ಮಾಡಿ ದೂರು ನೀಡಿದ್ದ. ಇದಕ್ಕೆ ಸಂಬಂಧಿಸಿದಂತೆ ಶಶಿಧರ್ ಅಕ್ಕ ಉಷಾ ಅವರೊಂದಿಗೆ ಯುವಕರು ಜಗಳ ಮಾಡಿಕೊಂಡಿದ್ದಾರೆ.
ನಿನ್ನ ತಮ್ಮ ಶಶಿ ತೋರಿಸು, ಅವನಿಂದ ನಮಗೆ ಅನ್ಯಾಯವಾಗಿದೆ ಎಂದು ಜಗಳ ಮಾಡಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಈ ಕುರಿತು ಮಹಿಳೆ ಬೀರೂರು ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ನವೀನ್, ಮಲ್ಲಿಕಾರ್ಜುನ್, ನಿತಿನ್, ಪವನ್ ಎಂಬುವವರ ವಿರುದ್ಧ ದೂರು ದಾಖಲಾಗಿದೆ.