ಚಿಕ್ಕೋಡಿ: ನಿನ್ನೆ ರಾತ್ರಿ ಸುರಿದ ಭಾರಿ ಗಾಳಿ ಸಹಿತ ಮಳೆಗೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮದಲ್ಲಿ ಅವಾಂತರ ಸೃಷ್ಠಿಯಾಗಿದೆ. ಗಾಳಿ ಮಳೆಗೆ ಮನೆಯ ಮೇಲ್ಛಾವಣಿ ಹಾರಿ ಹೋಗಿ ರಾತ್ರಿಯಿಡೀ ಬಾಣಂತಿ ಸಮೇತ ಕುಟುಂಬಸ್ಥರು ಪರದಾಡಿದ್ದಾರೆ.

ಅಪ್ಪಣ್ಣ ಸಿದ್ದಪ್ಪ ಹಿರೇಕೋಡಿ ಎಂಬ ರೈತನ ಮನೆ ಇದಾಗಿದ್ದು ಮನೆಯಲ್ಲಿ 15 ದಿನದ ಬಾಣಂತಿ ಕೂಡ ಇದ್ದರು. ಇದೀಗ ಇರಲು ಸೂರಿಲ್ಲದೇ ಕುಟುಂಬಸ್ಥರು ಕಂಗಲಾಗಿದ್ದಾರೆ ಆದಷ್ಟು ಬೇಗ ಪರಿಹಾರ ಕೊಡಿ ಎಂದು ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆ. ಇನ್ನು ರೈತನ ಮನೆಗೆ ರೈತ ಸಂಘದ ಸದಸ್ಯರು ಭೇಟಿ ನೀಡಿ ಧನ ಸಹಾಯ ಮಾಡಿದ್ದಾರೆ.