ಯುವಕನೋರ್ವನಿಗೆ ಸ್ನೇಹಿತರೇ ಕಂಠಪೂರ್ತಿ ಕುಡಿಸಿ, ರಾಬರಿ ಮಾಡಿಸಿ, ನಂತರ ತಾವೇ ಸ್ಟೇಷನ್ ಗೆ ಹೋಗಿ ದೂರು ಕೊಡಿಸಿರುವ ಘಟನೆಯೊಂದು ನಡೆದಿದೆ.
ಈ ಘಟನೆ ಬೆಂಗಳೂರಿನ ಚಿಕ್ಕಜಾಲದಲ್ಲಿ ನಡೆದಿದೆ. ಚಂದನ್, ಪವನ್, ಅಚಲ್ ಎಂಬ ಮೂವರು ಸ್ನೇಹಿತರು ಚಿಕ್ಕಜಾಲದ ಪಬ್ ಗೆ ಪಾರ್ಟಿಗೆಂದು ಹೋಗಿದ್ದರು. ಆ ವೇಳೆ ಪವನ್ ಹಾಗೂ ಅಚಲ್, ಚಂದನ್ಗೆ ಕಂಠಪೂರ್ತಿ ಕುಡಿಸಿದ್ದಾರೆ. ನಂತರ ಆತನಿಂದ ಚಿನ್ನದ ಕೈ ಕಡಗವನ್ನು ಕಳ್ಳತನ ಮಾಡಿಸಿದ್ದಾರೆ. ಬಳಿಕ ಜೆಪಿ ನಗರದ ಗ್ಯಾಂಗ್ ವೊಂದಕ್ಕೆ ಫೋನ್ ಮಾಡಿ ಪವನ್ ಹಾಗೂ ಅಚಲ್ ಕರೆಯಿಸಿಕೊಂಡು, ಪವನ್ ಗೆ ಹಿಗ್ಗಾಮುಗ್ಗಾ ಥಳಿಸಿ ಆತನ ಬಳಿಯಿದ್ದ ಚಿನ್ನಾಭರಣಗಳನ್ನು ಕದ್ದೊಯ್ದಿದ್ದಾರೆ. ಏಟು ತಿಂದು ಚಂದನ್ ಚಿಕ್ಕಜಾಲ ಠಾಣೆಗೆ ಹೋಗಿ ದೂರು ನೀಡಿದ್ದಾನೆ. ಅಚಲ್ ಕೂಡ ಹೋಗಿ ನನ್ನ ಚೈನ್ ಕೂಡ ಕದ್ದಿದ್ದಾರೆ ಎಂದು ದೂರು ನೀಡಿದ್ದಾನೆ.
ಸ್ನೇಹಿತನ ವರ್ತನೆಯಿಂದ ಅನುಮಾನಗೊಂಡ ಪೋಲಿಸರು ಅಚಲ್ ಕಾಲ್ ಹಿಸ್ಟರಿ ಪರಿಶೀಲನೆ ನಡೆಸಿದ್ದಾರೆ. ಆಗ ಸುಲಿಗೆ ಮಾಡಿದ್ದ ಗ್ಯಾಂಗ್ ಗು ಅಚಲ್ ಗೂ ಲಿಂಕ್ ಇರುವುದು ಪತ್ತೆಯಾಗಿದೆ. ನಂತರ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ.