ಹಪಲ್ಗಾಮ್ ದಾಳಿ ಬೆನ್ನಲ್ಲೇ ಪಾಕಿಸ್ತಾನ ವಿರುದ್ಧ ಭಾರತ ಕಠಿಣ ಕ್ರಮಕ್ಕೆ ಮುಂದಾಗಿದೆ. ಈಗಾಗಲೇ ಸಿಂಧೂ ಜಲ ಒಪ್ಪಂದವನ್ನು ಕಡೆದುಕೊಳ್ಳಲಾಗಿದ್ದು, ಭಾರತದಲ್ಲಿದ್ದ ಪಾಕಿಸ್ಥಾನಗಳನ್ನು ಹೊರಗಟ್ಟಲಾಗಿದೆ.
ಇದರ ನಡುವೆ, ದೇಶದ ಏಕತೆ, ಭದ್ರತೆ, ಸಾಮರಸ್ಯಕ್ಕೆ ಭಂಗ ತರುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಂತ 16 ಯೂ ಟ್ಯೂಬ್ ಚಾನಲ್ ಗಳಿಗೆ ನಿರ್ಬಂಧ ವಿಧಿಸಲಾಗಿದೆ. ಪಾಕಿಸ್ಥಾನದ ಡಾನ್ ಟಿವಿ, ಎಆರ್ ವೈ ನ್ಯೂಸ್, ಸಮಾ ನ್ಯೂಸ್, ಜಿಯೋ ನ್ಯೂಸ್ ವಾಹಿನಿಗಳ ಯೂ ಟ್ಯುಬ್ ಪ್ರಸಾರವನ್ನು ಭಾರತದಲ್ಲಿ ನಿಷೇಧಸಲಾಗಿದೆ. ಕೇಂದ್ರ ಗೃಹ ಸಚಿವಾಲಯದ ಶಿಫಾರಿಸ್ಸಿನ ಮೇರೆಗೆ ಈ ಕ್ರಮಕೈಗೊಳ್ಳಲಾಗಿದೆ.