ಬೆಂಗಳೂರು: ಮಳೆಯಿಂದಾಗಿ ಆರ್ ಸಿಬಿ ಹಾಗೂ ಕೆಕೆಆರ್ ನಡುವಿನ ಪಂದ್ಯ ರದ್ದಾಗಿದೆ. ಈ ಪಂದ್ಯದೊಂದಿಗೆ ಕೋಲ್ಕತ್ತಾ ಪ್ಲೇ ಆಫ್ ರೇಸ್ನಿಂದ ಹೊರ ಬಿದ್ದಿದೆ.
ಶನಿವಾರ ಸಂಜೆಯಿಂದಲೇ ಸಿಲಿಕಾನ್ ಸಿಟಿಯಲ್ಲಿ ಮಳೆರಾಯ ಮುಗಿಬಿದ್ದಿದ್ದ. ರಾತ್ರಿಯವರೆಗೂ ಅದು ಮುಂದುವರೆಯಿತು. ಹೀಗಾಗಿ ರಾತ್ರಿ 10:20ಕ್ಕೆ ಅಂಪೈರ್ಗಳು ಪಂದ್ಯ ರದ್ದುಗೊಳಿಸಿದರು.
ಬೆಂಗಳೂರು ತಂಡ 12 ಪಂದ್ಯಗಳಿಂದ 17 ಅಂಕ ಪಡೆದು ಪಾಯಿಂಟ್ ಟೇಬಲ್ ನಲ್ಲಿ ಮೊದಲ ಸ್ಥಾನಕ್ಕೆ ಲಗ್ಗೆಯಿಟ್ಟಿದೆ. ಈ ಮೂಲಕ ಆರ್ ಸಿಬಿ ಪ್ಲೇ ಆಫ್ ಹಾದಿಯನ್ನು ಅಧಿಕೃತವಾಗಿ ಸರಳ ಮಾಡಿಕೊಂಡಿದೆ. ಮುಂದಿನ ಹೈದರಾಬಾದ್ ಮತ್ತು ಲಕ್ನೋ ಜೊತೆ ಆಡಲಿರುವ ಪಂದ್ಯಗಳಲ್ಲಿ ಒಂದನ್ನಾದರೂ ಗೆಲ್ಲಬೇಕಾಗುತ್ತದೆ. ಒಂದು ವೇಳೆ ಎರಡೂ ಪಂದ್ಯ ಸೋತರೆ, ಆಗ ನೆಟ್ ರನ್ ರೇಟ್ ಮೂಲಕ ಆರ್ಸಿಬಿ ಪ್ಲೇ ಆಫ್ ಪ್ರವೇಶಿಸಬೇಕಾಗುತ್ತದೆ.