ಉಜ್ವಲ ಭವಿಷ್ಯದ ಕನಸಿನಲ್ಲಿದ್ದ 24 ವರ್ಷದ ಸಹನಾ ಬಾಳಲ್ಲೂ ಕ್ರೂರ ವಿಧಿ ತನ್ನ ಕರಾಳ ಆಟ ಆಡಿದೆ.
ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದ ಸಹನಾ ಮೂಲತ: ಕೋಲಾರದ ಕೆಜಿಎಫ್ ನ ಬಡಮಾಕನಹಳ್ಳಿಯವರು. ಓದಿನಲ್ಲಿ ಸದಾ ಮುಂದಿದ್ದ ಸಹನಾ, ಇಂಜಿನಿಯರಿಂಗ್ ಪೂರ್ಣಗೊಳಿಸಿ ಖಾಸಗಿ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. 2 ವರ್ಷಗಳ ಹಿಂದಷ್ಟೇ ಕ್ಯಾಂಪಸ್ ಸೆಲೆಕ್ಷನ್ ನಲ್ಲಿ ಆಯ್ಕೆಯಾಗಿದ್ದ ಸಹನಾ, ಉತ್ತಮ ಶ್ರೇಯಸ್ಸಿನ ಭರವಸೆ ಮೂಡಿಸಿದ್ದರು. ಶಿಕ್ಷಕರಾಗಿರುವ ಸುರೇಶ್ ಬಾಬು ಮತ್ತು ಮಂಜುಳಾ ದಂಪತಿ ಇದೀಗ ಮಗಳನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ.