ಕಾಂಗ್ರೆಸ್ ಸರ್ಕಾರದ ಭ್ರಹ್ಮಾಂಡ ಭ್ರಷ್ಚಾಚಾರ ಜಗತ್ ಜಾಹೀರಾಗಿದೆ. ಕರ್ನಾಟಕದ ಮೂಲೆ ಮೂಲೆಯಲ್ಲೂ ಸರ್ಕಾರ ಬ್ಯಾನರ್ ಹಾಕಿದಂತಿದೆ. ಹಣ ಕೊಡಿ ಮನೆ ಪಡಿಯಿರಿ ಅಂತಿದ್ದಾರೆ. ಹಾಗಂತಾ ಇದು ನಾವು ಆರೋಪಿಸ್ತಿರೋದಲ್ಲ. ಬದಲಿಗೆ ಖುದ್ದು ಕಾಂಗ್ರೆಸ್ ಶಾಸಸಕರೇ ಆರೋಪಿಸ್ತಿದ್ದಾರೆ ಅಂದ್ರೆ ಲೆಕ್ಕಾ ಹಾಕಿ ಅದೆಷ್ಟರ ಮಟ್ಟಿಗೆ ಲಂಚಾವತಾರ ಆವರಿಸಿದೆ ಅಂತಾ ವಿಪಕ್ಷ ನಾಯಕ ಆರ್ ಅಶೋಕ್ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಆರ್ ಅಶೋಕ್, ರಾಜ್ಯದಲ್ಲೀಗ ಲಂಚವಿಲ್ಲದೆ ಯಾವ ಕೆಲಸವೂ ಆಗುತ್ತಿಲ್ಲ. ಎಲ್ಲ ಯೋಜನೆಗಳಲ್ಲಿ ಕನಿಷ್ಠ 60 ಪರ್ಸೆಂಟ್ ಕಮಿಷನ್ ನೀಡಿದರೆ ಮಾತ್ರ ಕೆಲಸ ಆಗೋದು ಎನ್ನುವಂತಾಗಿದೆ. ಸಿದ್ದರಾಮಯ್ಯ ನಿದ್ರಾ ರಾಮಯ್ಯ ಆಗಿದ್ದಾರೆ. ಇವತ್ತು ಕೇವಲ ಬಿಆರ್ ಪಾಟೀಲ್ ಒಬ್ಬರು ಸತ್ಯ ಬಹಿರಂಗ ಮಾಡಿದ್ದಾರೆ. ಎಲ್ಲ 224 ಕ್ಷೇತ್ರಗಳ ಶಾಸಕರು ಬಾಯಿ ಬಿಟ್ಟರೆ, ಈ ಸರ್ಕಾರ 3 ನಿಮಿಷ ಅಧಿಕಾರದಲ್ಲಿ ಉಳಿಯುವುದಿಲ್ಲ ಎಂದು ಗುಡುಗಿದ್ದಾರೆ.
ವಸತಿ ಇಲಾಖೆಯ ಹಗರಣದ ನ್ಯಾಯಾಂಗ ತನಿಖೆ ಆಗಬೇಕು. ಬಡವರ ಸೂರಿನ ಹೆಸರಲ್ಲಿ ಲೂಟಿ ಮಾಡುತ್ತಿರುವ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಅಂತಾ ಅಶೋಕ್ ಆಗ್ರಹಿಸಿದ್ದಾರೆ