ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ಸಿನಿಮಾ-ಮನರಂಜನೆ

ಪುನೀತ್ ಎಂಬ ಅನರ್ಘ್ಯ ರತ್ನ…!

March 17, 2025
Share on WhatsappShare on FacebookShare on Twitter

ಇಂದು ಕನ್ನಡಿಗರ ಆರಾಧ್ಯದೈವ ಪುನೀತ್ ರಾಜ್ ಕುಮಾರ್ ಅವರ 50ನೇ ಜನ್ಮದಿನ. ಅಪ್ಪು ಜತೆಗಿಲ್ಲದಿದ್ದರೂ ಅವರ ಹುಟ್ಟುಹಬ್ಬವನ್ನು ಇಡೀ ಕರುನಾಡೇ ತನ್ನದೆಂಬಂತೆ ಆಚರಿಸುತ್ತಿದೆ. ಏಕೆಂದರೆ, “ಪುನೀತ್” ಎನ್ನುವುದು ಕರುನಾಡಿನ ಹೃದಯವೆಂಬ ಬೆಳ್ಳಿತೆರೆಯಲ್ಲಿ ಇಂದಿಗೂ ಬ್ಲಾಕ್ ಬಸ್ಟರ್ ಆಗಿ ಓಡುತ್ತಿರುವ ಚಿತ್ರ.

ಪುನೀತ್ ನಮ್ಮನ್ನಗಲಿ ವರ್ಷಗಳು ಉರುಳಿ ಹೋಗುತ್ತಿದ್ದರೂ, ಆ ಅನರ್ಘ್ಯ ರತ್ನದ ಮೌಲ್ಯ ಮಾತ್ರ ಕಡಿಮೆಯಾಗುವುದಿಲ್ಲ. ಇಂದಿಗೂ ರಾಜ್ಯದ ಹಿರಿಕಿರಿಯರಿಗೆ ಅಪ್ಪು ಸ್ಫೂರ್ತಿಯ ಸೆಲೆ. ಅಪ್ಪು ಎಂದರೆ ಸರಳತೆ, ಅಪ್ಪು ಅಂದರೆ ಪ್ರೀತಿ, ಅಪ್ಪು ಅಂದರೆ ನಿಷ್ಕಲ್ಮಶ ನಗು. ಯಾಕೆ, ಅಪ್ಪು ಎಂದರೆ ನಮ್ಮ ಜನರಿಗೆ ಯಾಕಿಷ್ಟು ಪ್ರೀತಿ? ಆ ಹೆಸರಲ್ಲೇನಿದೆ? ಯಾಕೆ ಇಂದಿಗೂ ಅವರನ್ನು ಕನ್ನಡಿಗರು ಆರಾಧಿಸುತ್ತಾರೆ ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೋದರೆ ಪರಮಾತ್ಮನೊಳಗಿನ ಶಕ್ತಿ ಅನಾವರಣಗೊಳ್ಳುತ್ತಾ ಸಾಗುತ್ತದೆ.

ಹೌದು, ಯುವರತ್ನ, ರಾಜಕುಮಾರ, ಪರಮಾತ್ಮ, ರಣವಿಕ್ರಮ, ಅಪ್ಪುವಾಗಿ ಮನೆ-ಮನಗಳಲ್ಲಿ ನೆಲೆಸಿರುವ ಪುನೀತ್ ರಾಜ್ ಕುಮಾರ್ ಅವರು ಇಹಲೋಕ ತ್ಯಜಿಸಿ ಮೂರೂವರೆ ವರ್ಷಗಳು ಕಳೆದರೂ, ಅವರು ಇಂದಿಗೂ ನಮ್ಮ ನಿಮ್ಮ ನಡುವೆಯೇ ಇದ್ದಾರೇನೋ ಅನ್ನುವಷ್ಟು ಜೀವಂತಿಕೆಯನ್ನು ಉಳಿಸಿಹೋಗಿದ್ದಾರೆ. ರಾಜ್ಯದ ಯಾವುದೋ ಹಳ್ಳಿಯಿಂದ ನಗರದ ಗಲ್ಲಿಗಳವರೆಗೂ ಇಂದಿಗೂ ಅಪ್ಪು ಆವರಿಸಿಬಿಟ್ಟಿದ್ದಾರೆ. ಅಪ್ಪುವಿನ ನಗುಮುಖದ ಭಾವಚಿತ್ರಗಳನ್ನು ನೋಡದೇ ರಾಜ್ಯದ ಒಂದು ಊರನ್ನೂ ದಾಟುವುದು ಸಾಧ್ಯವಿಲ್ಲ. ಹೋಟೆಲ್ ಗಳು, ಅಂಗಡಿಗಳು, ತಳ್ಳುಗಾಡಿಗಳು, ಆಟೋ, ಕಾರು, ಬಸ್ಸುಗಳು… ಹೀಗೆ ಕಣ್ಣು ಹಾಯಿಸಿದಲ್ಲೆಲ್ಲ ಅಪ್ಪು ಕಾಣುತ್ತಾರೆ, ಅವರ ನಿಷ್ಕಲ್ಮಶ ನಗುಮುಖ ಎಂಥವರನ್ನೂ ಸೆಳೆಯುತ್ತದೆ.

ಹೌದು, ಕಲಾವಿದ ಸತ್ತರೂ ಕಲೆಗೆ ಸಾವಿಲ್ಲ ಎಂಬ ಮಾತಿದೆ. ಆದರೆ, ಪುನೀತ್ ಬರೀ ನಟನಾಗಿರಲಿಲ್ಲ. ಅವರೊಂದು ಶಕ್ತಿಯಾಗಿದ್ದರು. ಸರಳತೆಯ ಸಾಕಾರಮೂರ್ತಿಯಾಗಿದ್ದರು. ಮಗುವಿನ ನಗುವನ್ನು ಹೊತ್ತಿದ್ದ ಬಂಗಾರದ ಮನುಷ್ಯನಾಗಿದ್ದರು. ಶ್ರೀಮಂತಿಕೆ, ದೊಡ್ಡಸ್ತಿಕೆ, ಸೆಲೆಬ್ರಿಟಿಯೆಂಬ ಪದವಿಗಳಿಗಿಂತಲೂ ಸಭ್ಯತೆ, ವಿನಯತೆ, ಹೃದಯವಂತಿಕೆಯೇ ಮೇಲು ಎಂಬುದನ್ನು ತೋರಿಸಿಕೊಟ್ಟಿದ್ದರು. ಬಲಗೈಯ್ಯಲ್ಲಿ ಕೊಟ್ಟಿದ್ದು, ಎಡಗೈಗೆ ತಿಳಿಯಬಾರದು ಎಂಬಂತೆ ನೂರಾರು ಮಕ್ಕಳಿಗೆ ಶಿಕ್ಷಣ, ಅನಾಥರಿಗೆ ಆಶ್ರಯ ನೀಡಿ ಹಲವರಿಗೆ ಸ್ಫೂರ್ತಿಯಾಗಿದ್ದರು. ಅದೇ ಕಾರಣಕ್ಕೆ ಪುನೀತ್ ರಾಜ್ ಕುಮಾರ್ ಜನ್ಮದಿನವನ್ನು ರಾಜ್ಯವು ಸ್ಫೂರ್ತಿ ದಿನವಾಗಿ ಆಚರಿಸುತ್ತಿದೆ.

ಕನ್ನಡ ಚಿತ್ರರಂಗದ “ಭಾಗ್ಯವಂತ”:
ಪುನೀತ್ ರಾಜ್ ಕುಮಾರ್ ಅವರು 3 ತಿಂಗಳಿದ್ದಾಗಲೇ ಬೆಳ್ಳಿತೆರೆಗೆ ಕಾಲಿಟ್ಟವರು. ತಮ್ಮ ಮಕ್ಕಳನ್ನು ಚೆನ್ನಾಗಿ ಓದಿಸಿ, ವಿದ್ಯಾವಂತರನ್ನಾಗಿಸಿ ಬೆಳೆಸಬೇಕೆಂದು ಡಾ.ರಾಜ್ ಕುಮಾರ್ ಅವರು ಕನಸು ಕಂಡಿದ್ದರು. ಆದರೆ, ಅಪ್ಪು ವಿಷಯದಲ್ಲಿ ಅದು ಅಪವಾದವಾಗಿತ್ತು. ಅಪ್ಪು ಮೇಲೆ ಅಪ್ಪನ ಅಭಿನಯದ ಪ್ರಭಾವವು ಎಷ್ಟು ಬೀರಿತ್ತೆಂದರೆ, ಕೇವಲ 3 ತಿಂಗಳ ಮಗುವಿದ್ದಾಗಲೇ ಅಪ್ಪು ಪ್ರೇಮದ ಕಾಣಿಕೆ ಚಿತ್ರದಲ್ಲಿ ಕಾಣಿಸಿಕೊಂಡರು. ಮಾರನೇ ವರ್ಷವೇ ಸನಾದಿ ಅಪ್ಪಣ್ಣ ಚಿತ್ರದಲ್ಲಿ ಹನುಮಂತುವಿನ ಪಾತ್ರ. ನಂತರದಲ್ಲಿ ತಾಯಿಗೆ ತಕ್ಕ ಮಗ, ವಸಂತಗೀತ, ಭೂಮಿಗೆ ಬಂದ ಭಗವಂತ, ಭಾಗ್ಯವಂತ, ಭಕ್ತ ಪ್ರಹ್ಲಾದ, ಯಾರಿವನು…. ಹೀಗೆ ಪುನೀತ್ ರಾಜ್ ಕುಮಾರ್ ಎಂಬ ಪುಟ್ಟ ಬಾಲಕ ಬೆಳ್ಳಿತೆರೆಯ ಅನಭಿಷಿಕ್ತ ದೊರೆಯಾಗಿ ಬೆಳೆದೇ ಬಿಟ್ಟಿದ್ದ. 1985ರಲ್ಲಿ ತೆರೆಕಂಡ ಬೆಟ್ಟದ ಹೂ ಚಿತ್ರವು ಅಪ್ಪುವನ್ನು ಮತ್ತೊಂದು ಮಜಲಿಗೆ ಹೊತ್ತೊಯ್ಯಿತು. ಈ ಚಿತ್ರದಲ್ಲಿ ರಾಮುವಿನ ಪಾತ್ರ ವಹಿಸಿ ಪುನೀತ್ ಮಾಡಿದ ಮನೋಜ್ಞ ಅಭಿನಯವು ಅವರ ಮುಡಿಗೆ ರಾಷ್ಟ್ರಪ್ರಶಸ್ತಿಯ ಗರಿಯನ್ನು ತೊಡಿಸಿತು. ತಾನೊಬ್ಬ ಅಪ್ಪಟ ಕಲಾವಿದ ಎಂಬುದನ್ನು ಈ ಚಿತ್ರದ ಮೂಲಕ ಅಪ್ಪು ಸಾಬೀತುಪಡಿಸಿದ್ದರು.

13 ವರ್ಷಗಳ ಕಾಲ ಬೆಳ್ಳಿತೆರೆಯಲ್ಲಿ ಮಿಂಚಿದ ಪುನೀತ್ ಮತ್ತೆ 13 ವರ್ಷ ತೆರೆಯ ಮರೆಗೆ ಸರಿದರು. ತಮ್ಮದೇ ಆದ ಉದ್ಯಮ, ವಹಿವಾಟು ಎಂದು ಬೇರೆ ದಾರಿಯತ್ತ ಸಾಗಿದರು. ಆದರೆ, ಚಿತ್ರರಂಗವೆಂಬ ಅಯಸ್ಕಾಂತದಿಂದ ಹೆಚ್ಚು ಕಾಲ ದೂರ ಉಳಿಯಲು ಅವರಿಗೆ ಸಾಧ್ಯವಾಗಲಿಲ್ಲ. ಕನ್ನಡಿಗರ ಹೃದಯ ಸಿಂಹಾಸನ ಏರಲು ಅವರಿಗೆ ಬಹಳ ದಿನ ಬೇಕಾಗಲಿಲ್ಲ. 2002ರಲ್ಲಿ ಅವರು ಮಾದರಿ ಯುವಕನ ಪಾತ್ರದಲ್ಲಿ ‘ಅಪ್ಪು’ವಾಗಿ ಅವತರಿಸಿದರು. ಮೊದಲ ಚಿತ್ರವೇ ದೊಡ್ಡ ಯಶಸ್ಸು ಪಡೆಯಿತು. ನಂತರದಲ್ಲಿ ಅವರು ತಿರುಗಿ ನೋಡಿದ್ದೇ ಇಲ್ಲ. ಒಂದಾದ ಮೇಲೆ ಒಂದರಂತೆ ಚಿತ್ರಗಳು ಅಪ್ಪುವನ್ನು ಅರಸಿ ಬಂದವು. 2007ರಲ್ಲಿ ಅರಸು ಚಿತ್ರದ ನಟನೆಗಾಗಿ ಫಿಲಂಫೇರ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದರು. ಅದೇ ವರ್ಷ ತೆರೆಕಂಡ ಮಿಲನ ಸಿನಿಮಾ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿಯನ್ನು ತಂದುಕೊಟ್ಟಿತು. ನಂತರದಲ್ಲಿ ಪೃಥ್ವಿ, ಪರಮಾತ್ಮ, ಅಣ್ಣಾಬಾಂಡ್‌, ನಿನ್ನಿಂದಲೇ, ಚಕ್ರವ್ಯೂಹ, ದೊಡ್ಮನೆ ಹುಡ್ಗ, ರಾಜಕುಮಾರ, ಅಂಜನಿ ಪುತ್ರ, ರಾಜರಥ, ನಟಸಾರ್ವಭೌಮ, ಯುವರತ್ನ, ಜೇಮ್ಸ್ ಹೀಗೆ ಹತ್ತು ಹಲವು ಸಿನಿಮಾಗಳ ಮೂಲಕ ಅಪ್ಪು ಚಿತ್ರರಸಿಕರ ಮನದಲ್ಲಿ ಶಾಶ್ವತ ಸ್ಥಾನ ಪಡೆದರು. ಅವರು ಪಾತ್ರವನ್ನು ಅಕ್ಷರಶಃ ಜೀವಿಸತೊಡಗಿದ್ದರು.

ಸ್ಫೂರ್ತಿಯ ಸೆಲೆಯಾದ ಜೀವ:
ದೊಡ್ಡ ನಟನೆಂಬ ಖ್ಯಾತಿ, ಶ್ರೀಮಂತಿಕೆ, ದೊಡ್ಡಸ್ತಿಕೆ, ಉತ್ತಮ ಆದಾಯ, ಸ್ಟಾರ್ ಪಟ್ಟ ಹೊಂದಿದ್ದ ಪುನೀತ್ ಅವರು ತಮಗೂ ಹೊರಜಗತ್ತಿಗೂ ನಡುವೆ ದೊಡ್ಡ ಗೋಡೆ ಕಟ್ಟಿ ಐಷಾರಾಮಿ ಬಂಗಲೆಯೊಳಗೇ ಉಳಿಯಬಹುದಿತ್ತು. ಆದರೆ, ಅವರು ಹಾಗೆ ಮಾಡಲಿಲ್ಲ. ಸ್ಟಾರ್ ಎಂಬ ಅಹಮಿಕೆಯನ್ನು ಬದಿಗಿಟ್ಟು, ಸೆಲೆಬ್ರಿಟಿಯೆಂಬ ಮ್ಯಾನರಿಸಂಗಳನ್ನೆಲ್ಲ ಗಂಟುಮೂಟೆ ಕಟ್ಟಿಟ್ಟು ಎಲ್ಲರೊಳಗೊಂದಾಗಿ ಬದುಕಿದರು. ವಿವಾದಗಳಿಂದ, ರಾಜಕೀಯದಿಂದ, ಕೆಸರೆರಚಾಟದಿಂದ ದೂರ ಉಳಿದರು. ಹೊಸಬರ ಸಿನಿಮಾಗಳಿಗೆ ಉತ್ತೇಜನ ನೀಡಿದರು. ಕಪಟವಿಲ್ಲದ ನಿಷ್ಕಲ್ಮಶ ನಗುವಿನ ಮೂಲಕ ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರ ಹೃದಯದಲ್ಲೂ ವೀರಾಜಮಾನರಾದರು. ಹಿರಿಯರು, ಕಿರಿಯರು ಎಂಬ ಭೇದವಿಲ್ಲದೇ ಎಲ್ಲರನ್ನೂ ಅಪ್ಪಿಕೊಂಡರು, ಎಲ್ಲರನ್ನೂ ಗೌರವಿಸಿದರು. ಯಾರನ್ನೂ ನೋಯಿಸದೇ, ಯಾವ ವಿವಾದಗಳಿಗೂ ಸಿಲುಕಿಕೊಳ್ಳದೇ ಚಿನ್ನದ ಮನುಷ್ಯನಾಗಿ ಬಾಳಿದರು.

ಕೊಡುಗೈ ದಾನಿ ಅಪ್ಪು
ಅಭಿನಯ ಲೋಕದಲ್ಲಿ ಛಾಪು ಮೂಡಿಸಿದ ಅಪ್ಪು ಮತ್ತೊಂದು ಕಡೆ ಸದ್ದಿಲ್ಲದೇ ಸಮಾಜ ಸೇವೆಯಲ್ಲಿ ತೊಡಗಿದ್ದರು. ಈ ವಿಷಯ ಜಗಜ್ಜಾಹೀರಾಗಿದ್ದು ಅವರು ಅಗಲಿದ ಬಳಿಕವೇ. ಅಂದರೆ, ಒಂದು ಕೈಯ್ಯಲ್ಲಿ ಕೊಟ್ಟಿದ್ದು, ಮತ್ತೊಂದು ಕೈಗೆ ಗೊತ್ತಾಗಬಾರದು ಎಂಬ ತತ್ವವನ್ನು ಶಿರಸಾವಹಿಸಿ ಪಾಲಿಸಿದ್ದ ಅಪ್ಪು, ಯಾವ ಪ್ರಚಾರದ ಗೀಳಿಗೂ ಹೋಗದೇ ಸಮಾಜಕ್ಕೆ ತಮ್ಮ ಕೈಲಾದ ಸೇವೆ ಮಾಡಿದ್ದರು. ಕೊರೊನಾ ಸೋಂಕಿನ ಸಂದರ್ಭದಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿಗೆ 50 ಲಕ್ಷ ರೂ. ನೀಡಿದರು, ಕೆಎಂಎಫ್ ಉತ್ಪನ್ನವಾದ ನಂದಿಗೆ ಹಾಲಿಗೆ ಗೌರವಧನವನ್ನೇ ಪಡೆಯದೇ ರಾಯಭಾರಿಯಾಗಿ ದುಡಿದರು, 2019ರಲ್ಲಿ ಉತ್ತರ ಕರ್ನಾಟಕವು ಪ್ರವಾಹದ ಸಂಕಷ್ಟ ಎದುರಿಸಿದಾಗ ಪರಿಹಾರಕ್ಕೆ ಧಾವಿಸಿದರು. ಅನೇಕ ಅನಾಥರಿಗೆ ಆಸರೆಯಾದರು, ತುಳಿತಕ್ಕೊಳಗಾದವರಿಗೆ ಶಕ್ತಿಯಾದರು, ಬಡ ಮಕ್ಕಳ ಶಿಕ್ಷಣಕ್ಕೆ ನೆರವಾದರು. ವಿವಿಧ ರೀತಿಯ ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಅಪ್ಪು ಯಾರಿಗೂ ತಿಳಿಯದಂತೆಯೇ ಮತ್ತಷ್ಟು ಎತ್ತರಕ್ಕೆ ಏರಿಬಿಟ್ಟಿದ್ದರು.

46 ವರ್ಷಗಳಷ್ಟೇ ಬದುಕಿದರೂ ಅವರು ದೊಡ್ಡ ಹೆಸರನ್ನು, ಅಪಾರ ಪ್ರೀತಿಯನ್ನು ಉಳಿಸಿಹೋಗಿದ್ದಾರೆ. ತಮ್ಮಮಾಸದ ನಗು, ಸರಳತೆ, ಸ್ನೇಹಪರತೆಯಿಂದ ಇಂದಿಗೂ ಅವರು ಕನ್ನಡಿಗರ ಉಸಿರಾಗಿ ಉಳಿದಿದ್ದಾರೆ. ಅವರನ್ನು ಕರುನಾಡು ಬರೀ ಪ್ರೀತಿಸುತ್ತಿಲ್ಲ, ಆರಾಧಿಸುತ್ತಿದೆ.

Tags: AppuBirthdayKarnataka ratnapuneet rajakumarSandalwood
SendShareTweet
Previous Post

ಎಂದೆಂದಿಗೂ ನಮ್ಮ ಹೃದಯದಲ್ಲಿ ‘ಪರಮಾತ್ಮ’!

Next Post

Puneeth Rajkumar: ಪುನೀತ್​ ರಾಜ್​ಕುಮಾರ್ ಕುರಿತು ಈ ವಿಚಾರಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು

Related Posts

ಕಮಲ್‌ ಹಾಸನ್‌ಗೆ ʻಸುಪ್ರೀಂʼ ಶಾಕ್‌…!
ಸಿನಿಮಾ-ಮನರಂಜನೆ

ಕಮಲ್‌ ಹಾಸನ್‌ಗೆ ʻಸುಪ್ರೀಂʼ ಶಾಕ್‌…!

ಅಕ್ಕಿನೇನಿ ಕುಟುಂಬದಲ್ಲಿ ಮದುವೆಯ ಸಂಭ್ರಮ; ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಖಿಲ್ ಅಕ್ಕಿನೇನಿ
ಸಿನಿಮಾ-ಮನರಂಜನೆ

ಅಕ್ಕಿನೇನಿ ಕುಟುಂಬದಲ್ಲಿ ಮದುವೆಯ ಸಂಭ್ರಮ; ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಖಿಲ್ ಅಕ್ಕಿನೇನಿ

ಕನ್ನಡದ ತಂಟೆಗೆ ಬಂದು ಏಟು ತಿಂದ ಕಮಲ್ ಹಾಸನ್
ಸಿನಿಮಾ-ಮನರಂಜನೆ

ಕನ್ನಡದ ತಂಟೆಗೆ ಬಂದು ಏಟು ತಿಂದ ಕಮಲ್ ಹಾಸನ್

ಹೊಸ ಉದ್ಯಮ ಆರಂಭಿಸಿದ ರಿಯಾ ಚಕ್ರವರ್ತಿ
ಸಿನಿಮಾ-ಮನರಂಜನೆ

ಹೊಸ ಉದ್ಯಮ ಆರಂಭಿಸಿದ ರಿಯಾ ಚಕ್ರವರ್ತಿ

83ನೇ ವಯಸ್ಸಿನಲ್ಲಿ 855 ಕೋಟಿ ಗಳಿಸಿದ ನಟ ಜಿತೇಂದ್ರ
ಸಿನಿಮಾ-ಮನರಂಜನೆ

83ನೇ ವಯಸ್ಸಿನಲ್ಲಿ 855 ಕೋಟಿ ಗಳಿಸಿದ ನಟ ಜಿತೇಂದ್ರ

ಆ ಆಡಿಯೋ ನನ್ನದಲ್ಲ; ಆಡಿಯೋ ಬಗ್ಗೆ ಮಡೆನೂರು ಮನು ರಿಯಾಕ್ಟ್‌
ಸಿನಿಮಾ-ಮನರಂಜನೆ

ಕಾಮಿಡಿ ಕಿಲಾಡಿ ಖ್ಯಾತಿಯ ನಟ ಮಡೆನೂರು ಮನುನ ಮತ್ತೊಂದು ಅವಾಂತರ ಬಯಲಿಗೆ?

Next Post
Puneeth Rajkumar: ಪುನೀತ್​ ರಾಜ್​ಕುಮಾರ್ ಕುರಿತು ಈ ವಿಚಾರಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು

Puneeth Rajkumar: ಪುನೀತ್​ ರಾಜ್​ಕುಮಾರ್ ಕುರಿತು ಈ ವಿಚಾರಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿಗೆ ಪ್ರವೀಣ್ ಕುಮಾರ್ ಶೆಟ್ಟಿ ಆಯ್ಕೆ!

ಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿಗೆ ಪ್ರವೀಣ್ ಕುಮಾರ್ ಶೆಟ್ಟಿ ಆಯ್ಕೆ!

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಸಿಎಂ ಸಿದ್ದರಾಮಯ್ಯ ವಿಡಿಯೋ ಟ್ವೀಟ್ ಮಾಡಿದ ಬಿಜೆಪಿ

ಸಿಎಂ ಸಿದ್ದರಾಮಯ್ಯ ವಿಡಿಯೋ ಟ್ವೀಟ್ ಮಾಡಿದ ಬಿಜೆಪಿ

ಜಮೀನು ಗುತ್ತಿಗೆ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

ಜಮೀನು ಗುತ್ತಿಗೆ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

ಬಿಬಿಎಂಪಿ ಮಾರುಕಟ್ಟೆ ನಿಯಂತ್ರಿಸುತ್ತಿರುವ ಲೋಕಲ್ ಮಾಫಿಯಾ!

ಇ ಖಾತಾ ಕಡ್ಡಾಯ ಮಾಡಿದ ಬಿಬಿಎಂಪಿ

ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುವಂತಿಲ್ಲ

ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುವಂತಿಲ್ಲ

Recent News

ಸಿಎಂ ಸಿದ್ದರಾಮಯ್ಯ ವಿಡಿಯೋ ಟ್ವೀಟ್ ಮಾಡಿದ ಬಿಜೆಪಿ

ಸಿಎಂ ಸಿದ್ದರಾಮಯ್ಯ ವಿಡಿಯೋ ಟ್ವೀಟ್ ಮಾಡಿದ ಬಿಜೆಪಿ

ಜಮೀನು ಗುತ್ತಿಗೆ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

ಜಮೀನು ಗುತ್ತಿಗೆ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

ಬಿಬಿಎಂಪಿ ಮಾರುಕಟ್ಟೆ ನಿಯಂತ್ರಿಸುತ್ತಿರುವ ಲೋಕಲ್ ಮಾಫಿಯಾ!

ಇ ಖಾತಾ ಕಡ್ಡಾಯ ಮಾಡಿದ ಬಿಬಿಎಂಪಿ

ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುವಂತಿಲ್ಲ

ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುವಂತಿಲ್ಲ

ಕರ್ನಾಟಕ ನ್ಯೂಸ್ ಬೀಟ್

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

youtube

Browse by Category

  • News & Politics
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಸಿಎಂ ಸಿದ್ದರಾಮಯ್ಯ ವಿಡಿಯೋ ಟ್ವೀಟ್ ಮಾಡಿದ ಬಿಜೆಪಿ

ಸಿಎಂ ಸಿದ್ದರಾಮಯ್ಯ ವಿಡಿಯೋ ಟ್ವೀಟ್ ಮಾಡಿದ ಬಿಜೆಪಿ

ಜಮೀನು ಗುತ್ತಿಗೆ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

ಜಮೀನು ಗುತ್ತಿಗೆ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat