ಪಹಲ್ಗಾಮ್ ದಾಳಿ ಬೆನ್ನಲ್ಲೇ ಭಾರತ ಮತ್ತೊಂದು ಮಹತ್ತರ ಹೆಜ್ಜೆ ಇಟ್ಟಿದೆ. ಭದ್ರತಾ ಸಲಹಾ ಮಂಡಳಿಯನ್ನು ಪುನಾರಚಿಸುವ ಮೂಲಕ ಕ್ರಾಂತಿಕಾರಕ ನಿರ್ಧಾರ ಮಾಡಿದೆ.
ಏಳು ಮಂದಿ ನೂತನ ಸದಸ್ಯರನ್ನು ಮಂಡಳಿಗೆ ನೇಮಿಸಿದೆ. ಮಾಜಿ ಮುಖ್ಯಸ್ಥ ಅಲೋಕ್ ಜೋಶಿಯವರನ್ನು ಇಗೀಗ ಸಮಿತಿ ಅಧ್ಯಕ್ಷರನ್ನಾಗಿಸಿದೆ. ಉಳಿದಂತೆ, ಮಾಜಿ ಏರ್ ಕಮಾಂಡರ್ ಪಿಎಂ ಸಿನ್ಹಾ, ಮಾಜಿ ಸೇನಾಧಿಕಾರಿ ಎಕೆ ಸಿಂಗ್ ಹಾಗೂ ಮಾಜಿ ಸೇನಾಧಿಕಾರಿ ಮೌಂಟಿ ಖನ್ನಾರನ್ನು ತಂಡಕ್ಕೆ ಸೇರ್ಪಡೆ ಮಾಡಲಾಗಿದೆ.
ಇವರೊಟ್ಟಿಗೆ ಇಬ್ಬರು ಮಾಜಿ ಐಪಿಎಸ್ ಅಧಿಕಾರಿಗಳನ್ನೂ ಸಮಿತಿಗೆ ನೇಮಿಸಲಾಗಿದೆ. ಈ ಪೈಕಿ ಮಾಜಿ ಐಪಿಎಸ್ ಅಧಿಕಾರಿ ರಾಜನ್ ವರ್ಮಾ, ಮನಮೋಹನ್ ಸಿಂಗ್ ರನ್ನು ಸೇರ್ಪಡೆ ಮಾಡಲಾಗಿದೆ. ಅಂತಿಮವಾಗಿ ಮಾಜಿ ಐಎಫ್ ಎಸ್ ಅಧಿಕಾರಿ ಬಿ ವೆಂಕಟೇಶ್ ವರ್ಮಾರಿಗೂ ಅವಕಾಶ ನೀಡಲಾಗಿದೆ.