ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶರ ಮುಂದೆ ಸಂತ್ರಸ್ತೆ ಹೇಳಿಕೆ ದಾಖಲು ಮಾಡಿದ್ದಾರೆ.
ಇನ್ ಕ್ಯಾಮೆರಾ ಪ್ರೊಸಿಡಿಂಗ್ಸ್ ನಲ್ಲಿ ಹೇಳಿಕೆ ದಾಖಲು ಮಾಡಿದ್ದಾರೆ. ಈ ವೇಳೆ ಆರೋಪಿ ಪ್ರಜ್ವಲ್ ರೇವಣ್ಣ ಕೂಡ ಕೋರ್ಟ್ ನಲ್ಲಿ ಹಾಜರಿದ್ದ ಎನ್ನಲಾಗಿದೆ.
ಸಂತ್ರಸ್ತೆಯ ಹೇಳಿಕೆ ದಾಖಲು ಮಾಡದಂತೆ ಪ್ರಜ್ವಲ್ ಕಾನೂನು ಹೋರಾಟ ಮಾಡುತ್ತಿದ್ದ. ಕೊನೆಗೆ ಪ್ರಜ್ವಲ್ ಪರ ಉಚಿತ ಕಾನೂನು ಸೇವೆ ನೀಡಲಾಯಿತು. ಪ್ರಜ್ವಲ್ ಪರ ಡಿಎಲ್ ಎಸ್ ಇಯಿಂದ ವಕೀಲೆ ಜಯಶ್ರೀ ಹಾಜರಾಗಿದ್ದರು. ಸಂತ್ರಸ್ತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಹೇಳಿಕೆ ದಾಖಲು ಮಾಡಿದ್ದಾರೆ.