ಕಲ್ಯಾಣ ಕರ್ನಾಟಕ ಆರೋಗ್ಯ ಆವಿಷ್ಕಾರ ಸಮಾರಂಭ ಯಾದಗಿರಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಿತು. ಆದರೆ, ನೆರೆದಿದ್ದ ಜನರು ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ಊಟಕ್ಕಾಗಿ ಮುಗಿಬಿದ್ದಿದ್ದರು. ಊಟದ ತಟ್ಟೆಗಾಗಿ ನೂಕು ನುಗ್ಗಲು ಉಂಟಾಗಿ ಒಬ್ಬರ ಮೇಲ್ಲೋಬ್ಬರು ಬಿದ್ದು ಪ್ಲೇಟ್ ಗಳನ್ನು ಜನರು ಕಸಿದಿದ್ದಾರೆ. ಈ ವೇಳೆ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ಊಟಕ್ಕಾಗಿ ಕಚ್ಚಾಡಿರುವುದು ಆಯೋಜಕರ ಬೇಸರಕ್ಕೆ ಕಾರಣವಾಗಿದೆ.