ಪಹಲ್ಗಾಮ್ ದಾಳಿಕೋರರನ್ನು ಚಿಂದಿ ಉಡಾಯಿಸುವ ಕಾರ್ಯವನ್ನು ಭಾರತ ಆರಂಭಿಸಿತ್ತು. ಅವತ್ತು ಬಿಹಾರದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಉಗ್ರರು ಎಲ್ಲೇ ಅಡಗಿದರೂ ಬಿಡುವುದಿಲ್ಲ. ಇತಿಹಾಸವೇ ನೆನಪಿಟ್ಟುಕೊಳ್ಳುವಂತೆ ಉತ್ತರಿಸ್ತೀವಿ ಅಂತಾ ಘೋಷಿಸಿದರು. ಇತ್ತ ಪಾಕಿಸ್ತಾನ ತನ್ನ ಗುಳ್ಳೆನರಿ ಬುದ್ಧಿಗೆ ಮತ್ತೆ ಕೆಲಸ ಕೊಟ್ಟಿತ್ತು. ಭಾರತದ ವಿರುದ್ಧ ಸದಾ ಮಚ್ಚು ಮಸಿಯೋ ಪಾಕ್ ಅವತ್ತು ಸಿಖ್ಖರ ಪವಿತ್ರ ಕ್ಷೇತ್ರ ಅಮೃತಸರದ ಗೋಲ್ಡನ್ ಟೆಂಪಲನ್ನು ಟಾರ್ಗೆಟ್ ಮಾಡಿದ್ದ ವಿಚಾರವೀಗ ಬಯಲಾಗಿದೆ.
ಮೇ 8ರ ಮಧ್ಯರಾತ್ರಿ ಹಾರಿ ಬಂದಿದ್ವು ಪಾಕ್ ಡ್ರೋನ್
ಮೇ 7-8ರ ಮಧ್ಯರಾತ್ರಿ….ಒಂದೆಡೆ ಭಾರತ ಆಪರೇಷನ್ ಸಿಂಧೂರ್ ಗೆ ಮುನ್ನುಡಿ ಬರೆದಿತ್ತು. ಇತ್ತ, ಪಾಕಿಸ್ತಾನ ಕೂಡಾ ತನ್ನ ಕಪಟ ನಾಯಕ ಶುರುಮಾಡಿತ್ತು. ಆಪರೇಷನ್ ಸಿಂಧೂರ್ ನ ಕಿಂಚಿತ್ ಸುಳಿವಿಲ್ಲದ ಪಾಕ್ ಅವತ್ತು ನಡುರಾತ್ರಿ ಭಾರತವನ್ನು ಟಾರ್ಗೆಟ್ ಮಾಡಿ ಟರ್ಕಿ ನಿರ್ಮಿತ ಡ್ರೋನ್ ಗಳನ್ನು ಹಾರಿಬಿಟ್ಟಿತ್ತು. ಅದು ಕೂಡಾ ಅಮೃತಸರದ ಸ್ವರ್ಣ ಮಂದಿರವನ್ನು ಉಡಾಯಿಸುವ ಉದ್ಧೇಶದಿಂದ. ಆದರೆ, ಭಾರತದ ಬಾನಿಗೆ ಕಾವಲು ನಿಂತಿದ್ದ ಆಕಾಶ್ ರೆಡಾರ್ ಸಿಸ್ಟಂ ಪಾಕಿಗಳ ಕುತಂತ್ರಕ್ಕೆ ಬಾನಲ್ಲೇ ದಿಟ್ಟ ಉತ್ತರ ನೀಡಿತ್ತು.
ಸ್ವರ್ಣ ಮಂದಿರವನ್ನು ಉಡಾಯಿಸಲು ಡ್ರೋನ್ ದಾಳಿ
ಪಾಕಿಸ್ತಾನದ ಡೆಡ್ಲಿ ಡ್ರೋನ್ ಗಳ ಸಾಲು ಸಾಲಾಗಿ ಬಾನಿಗೆ ಹಾರಿದ್ದವು. ಭಾರತದ ಗಡಿ ದಾಟಿ ಒಳ ನುಸುಳಲು ಮುಂದಾಗಿದ್ದವು. ಅತ್ಯಂತ ಪ್ರಬಲ ಸ್ಫೋಟಕಗಳನ್ನು ಹೊತ್ತು ಬಂದಿದ್ದ ಈ ಡ್ರೋನ್ ಗಳ ಗುರಿ ಅಮೃತಸರವಾಗಿತ್ತು. ಸಿಖ್ಖರ ಪವಿತ್ರ ಕ್ಷೇತ್ರವಾದ ಸ್ವರ್ಣಮಂದಿರವನ್ನು ಉಡಾಯಿಸುವುದು ಪಾಕಿಗಳ ಪ್ಲ್ಯಾನ್ ಆಗಿತ್ತು. ಆದ್ರೆ, ಅದಾಗಲೇ ಪಾಕಿಗಳ ಕುತಂತ್ರದ ಸುಳಿವಿದ್ದ ಭಾರತ, ಅಮೃತಸರ ಬಳಿಯ ಇಂಡೋ-ಪಾಕ್ ಗಡಿಗೆ ಹೊಂದಿಕೊಂಡಂತೆ ಆಕಾಶ್ ಕ್ಷಿಪಣಿ ತಡೆ ಅಸ್ತ್ರವನ್ನು ನಿಯೋಜಿಸಿತ್ತು. ಅಷ್ಟೇ, ಸ್ವರ್ಣ ಮಂದಿರ ಉಡಾಯಿಸಲು ಸಾಗಿ ಬಂದಿದ್ದ ಡ್ರೋನ್ ಗಳನ್ನು ಆಕಾಶ್, ಬಾನಲ್ಲೇ ಸುಟ್ಟು ಬೂದಿ ಮಾಡಿತ್ತು. ಈ ಮೂಲಕ ಪವಿತ್ರ ತಾಣವನ್ನು ಉಡಾಯಿಸುವ ಪಾಕಿಗಳ ಹುನ್ನಾರವೂ ಅಂತ್ಯವಾಗಿತ್ತು.