ಏಪ್ರಿಲ್ 22..ಭಾರತದ ಕರಾಳ ಇತಿಹಾಸಗಳ ಪುಟದಲ್ಲಿ ಎಂದಿಗೂ ಮಾಸದ ಅಧ್ಯಾಯವಾಗಿ ಉಳಿದುಬಿಟ್ಟಿದೆ. ಅವತ್ತು ಮುಂಜಾನೆಯ ಸ್ವಚ್ಛಂದ ವಾತಾವರಣದಲ್ಲಿ ಸೂರ್ಯ ನಿಧಾನವಾಗೇ ಉದಯಸಿಸಿದ್ದ. ಭಾರತದ ಸ್ವಿಜರ್ ಲೆಂಡ್ ಅಂತಲೇ ಕರೆಯಿಸಿಕೊಳ್ಳುವ ಪಹಲ್ಗಾಮ್ ನಿತ್ಯದಂತೆ ಜಗತ್ತಿಗೆ ತೆರೆದುಕೊಂಡಿತ್ತು. ದೇಶ, ವಿದೇಶಗಳ ನೂರಾರು ಪ್ರವಾಸಿಗರು ಮೈ ಕೊರೆಯುವ ಚಳಿಯ ವಾತಾವರಣದಲ್ಲಿ ದೈತ್ಯ ವೋಕ್ ಮರಗಳ ದಟ್ಟ ಕಾನನದ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದರು. ಪುಟ್ಟ ಕಂದಮ್ಮಗಳಾದಿಯಾಗಿ ವಯೋವೃದ್ಧರವರೆಗೂ ಅದೇನೋ ಒಂದು ತಣ್ಣನೆಯ ಉತ್ಸಾಹ. ಅಷ್ಟೇ. ಹಿಮವನ್ನೇ ಹೊದ್ದು ಮಲಗಿದ್ದ ದೈತ್ಯ ಪರ್ವತಗಳ ಕಣ್ಣ ಸಾಕ್ಷಿಯಾಗಿ ಅವತ್ತಲ್ಲಿ ಯಾರೆಂದೂ ಊಹಿಸದ ರಕ್ತಪಾತ ನಡೆದುಬಿಟ್ಟಿತ್ತು.

ಆಪರೇಷನ್ ಸಿಂಧೂರದ ಪ್ರತೀಕಾರ
ಪಹಲ್ಗಾಮ್ ನ ಅತ್ಯಂತ ಸುಂದರ ತಾಣ ಬೈಸರನ್ ವ್ಯಾಲಿಯ ಪ್ರಕೃತಿ ಕಣ್ತುಂಬಿಕೊಳ್ಳುತ್ತಿದ್ದ ಪ್ರವಾಸಿಗರ ಮೇಲೆ ರಾಕ್ಷಸರ ದಾಳಿಯಾಗಿತ್ತು. ಎಕೆ 47 ಬಂದೂಕುಧಾರಿಗಳು ಧರ್ಮ ಕೇಳಿ ಕೇಳಿ, ನೆತ್ತರು ಹೀರಿದ್ದರು. ಒಂದಲ್ಲಾ ಎರಡಲ್ಲಾ 26 ಜನರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಹೊಸದಾಗಿ ಮದುವೆಯಾಗಿ ಹನಿಮೂನ್ ಗೆ ಅಂತಾ ಬಂದವರು ಹೆಣವಾಗಿದ್ದರು. ನಮ್ಮ ಮನೆ ಹೆಣ್ಣುಮಕ್ಕಳ ಸಿಂಧೂರವನ್ನು ಜಿಹಾದಿ ಕ್ರಿಮಿಗಳು ಅಳಿಸಿ ಹಾಕಿದ್ದರು. ಆದರೆ ಇದಕ್ಕೆ ಪ್ರತ್ಯುತ್ತರದ ಶಪಥಗೈದಿದ್ದ ಪ್ರಧಾನಿ ಮೋದಿ ಆಪರೇಷನ್ ಸಿಂಧೂರದ ಮೂಲಕ ಉಗ್ರರ ಬೆನ್ನಿಗೆ ನಿಂತ ಪಾಕ್ ಸೇರಿದಂತೆ ಕರ್ಮಠರ ಎದೆ ಬಗೆದಿದಿದ್ರು. ಆದ್ರೆ ಅವತ್ತು ಪಹಲ್ಗಾಮ್ ನಲ್ಲಿ ಪ್ರವಾಸಿಗರ ನೆತ್ತರು ಹೀರಿದ ನರರಾಕ್ಷಸರು ಮಾತ್ರ ಇಂದಿಗೂ ಜೀವಂತವಾಗಿದ್ದಾರ. ನಿಜಕ್ಕೂ ಶ್ವೇತ ವರ್ಣದ ಮಣ್ಣನ್ನ ಅವತ್ತು ನೆತ್ತರಿನಿಂದಲೇ ಕಂಪಾಗಿಸಿದವರ ರುಂಡಚೆಂಡಾಡೋದಿನ್ನೂ ಬಾಕಿ ಇದೆ.
ಪ್ರವಾಸಿಗರಿಲ್ಲದೆ ಪಹಲ್ಗಾಮ್ ಭಣಭಣ
ಹತ್ಯಾಕಾಂಡ ಘಟಿಸಿ ಒಂದು ತಿಂಗಳು ಕಳೆದುಹೋಗಿದೆ. ಅಸಲಿಗೆ ಪಹಲ್ಗಾಮ್ ಪ್ರವಾಸಿಗರ ಪಾಲಿನ ಸ್ವರ್ಗ. ಹೀಗೆ ಸ್ವರ್ಗಕ್ಕೆ ಬರುವುದರಿಂದ ಸ್ಥಳೀಯರಿಗೆ ಆದಾಯ. ಆದರೆ ನರಮೇಧದ ಬಳಿಕ ಪ್ರವಾಸಿಗರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ತಗ್ಗಿದೆ. ಹೋಟೆಲ್, ಲಾಡ್ಜ್ ಗಳು ಭಣಗುಡುತ್ತಿವೆ. ಟ್ಯಾಕ್ಸಿ, ಕುದುರೆ ಸವಾರಿ ನಂಬಿ ಬದುಕೋರು ಒಪ್ಪತ್ತಿನ ಊಟಕ್ಕೂ ಪರದಾಡ್ತಿದ್ದಾರೆ. ಸದಾ ಪ್ರವಾಸಿಗರಿಂದಲೇ ಗಿಜಗುಡುತ್ತಿದ್ದ ರಸ್ತೆಗಳಲ್ಲಿಂದು ಸೇನಾ ವಾಹನಗಳು, ಯೋಧರ ಬೂಟಿನ ಸದ್ದು ಮಾತ್ರ ಕೇಳ್ತಿದೆ. ಒಟ್ನಲ್ಲಿ ಉಗ್ರವಾದ ಕರಾಳ ಪ್ರತಿಬಿಂಬ ಪಹಲ್ಗಾಮ್ ನಲ್ಲಿ ಇಂದಿಗೂ ಜೀವಂತವಾಗಿದೆ.