ಬೆಂಗಳೂರು: ಪಾಕಿಸ್ತಾನದ ಕಿತಾಪತಿಯ ವಿಚಾರವಾಗಿ ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಅಮೇರಿಕಾವು ಪಾಕಿಸ್ತಾನಕ್ಕೆ ಹೋಗಿ ಬಿನ್ ಲಾಡೆನ್ ನ್ನು ಹೊಡೆದು ತಂದರು. ಅದೇ ರೀತಿ ಮೋದಿ – ಅಮಿತ್ ಷಾ ಉಗ್ರರನ್ನ ಹೊಡೆದು ತರಬೇಕು. ಆಗ ಮಾತ್ರ ನಾವು ಅವರನ್ನು ಒಪ್ಪಲು ಸಾಧ್ಯ. ಸುಮ್ಮನೆ ಯುದ್ಧ ಅಂದರೆ ಆಗಲ್ಲ. ಅವರು ಅಣುಬಾಂಬ್ ಹಾಕ್ತೇವೆ ಅಂದಿದ್ದಾರೆ. ಅದು ಇಬ್ಬರಿಗೂ ನಷ್ಟ ಅಲ್ಲವಾ? ಇವರು ಆಡಳಿತಕ್ಕೆ ಬಂದು 11 ವರ್ಷ ಆಯ್ತು. ಇವರು ಕೆಲವು ಕಾನೂನು ತಂದು ಬೇರೆ ಬೇರೆ ಸಮುದಾಯಕ್ಕೆ ಬೇಸರ ತರಿಸಿದ್ದಾರೆ. ಅದನ್ನು ಬಿಟ್ಟು ಏನೂ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಹೀಗಾಗಿಯೇ ದೇಶದಲ್ಲಿ ಈ ರೀತಿ ಘಟನೆಗಳು ನಡೆಯುತ್ತಿವೆ. ಇಂತಹ ಘಟನೆಗಳನ್ನು ಮೊದಲು ನಿಯಂತ್ರಣ ಮಾಡಬೇಕು. ಪ್ರವಾಸಿ ಸ್ಥಳಗಳಲ್ಲಿ ಭದ್ರತೆ ಕೊಡಬೇಕು. ಅದನ್ನ ಬಿಟ್ಟು ಯುದ್ಧ ಅಂದರೆ ಆಗಲ್ಲ. ನಾವು ವಿರೋಧ ಪಕ್ಷದವರು ಮಾತನಾಡಿದರೆ ರಾಜಕೀಯ ಅಂತಾರೆ ನಾವೇನು ಪ್ರಶ್ನೆ ಮಾಡಬಾರದಾ? ಎಂದು ಪ್ರಶ್ನಿಸಿದ ಬಾಲಕೃಷ್ಣ ವಾಗ್ದಾಳಿ ನಡೆಸಿದ್ದಾರೆ.