ತಿರುವನಂತಪುರಂ: ಕೇರಳ ಪದ್ಮನಾಭ ದೇವಸ್ಥಾನದ ಆವರಣದಲ್ಲಿ ಸರ್ಕಾರಿ ಅಧಿಕಾರಿಯೊಬ್ಬರು ಚಿಕನ್ ಬಿರಿಯಾನಿ ಹಂಚಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಬಿ ಮಹೇಶ್ ಚಿಕನ್ ಬಿರಿಯಾನಿ ಹಂಚಿದ ಅಧಿಕಾರಿ ಎನ್ನಲಾಗಿದೆ. ಬಿ ಮಹೇಶ್ ಪುತ್ರನಿಗೆ ಸರ್ಕಾರಿ ಉದ್ಯೋಗ ಸಿಕ್ಕ ಸಂಭ್ರಮದಲ್ಲಿ ದೇವಸ್ಥಾನದ ಒಳಗೆ ಚಿಕನ್ ಬಿರಿಯಾನಿ ಹಂಚಿ ದೇವಸ್ಥಾನವನ್ನು ಅಪವಿತ್ರಗೊಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಸದ್ಯ ಈ ಪ್ರಕರಣ ಕೋರ್ಟ್ ಮೆಟ್ಟಿಲು ಏರಿದ್ದು, ವಿಚಾರಣೆಯನ್ನು ಜುಲೈ 29ಕ್ಕೆ ನಡೆಸುವುದಾಗಿ ಕೋರ್ಟ್ ಹೇಳಿದೆ. ಜುಲೈ 6 ರಂದು ದೇವಸ್ಥಾನದ ಸಮಿತಿ ಕಾರ್ಯದರ್ಶಿ ಬಿ ಮಹಿಳೆ ದೇವಸ್ಥಾನದ ಎದುರು ಚಿಕಿನ್ ಬಿರಿಯಾನಿ ಹಂಚಿದ್ದಾರೆ. ಮಹೇಶ್ ಪುತ್ರನಿಗೆ ಕೇರಳ ಸರ್ಕಾರಿ ಕೆಲಸ ಗಿಟ್ಟಿಸಿದ ಸಂಭ್ರಮದಲ್ಲಿ ದೇವಸ್ಥಾನವನ್ನು ಪಾವಿತ್ರ್ಯತೆ ಹಾಳು ಮಾಡಿದ್ದಾನೆ ಎಂದು ಅಲ್ಲಿದ್ದವರು ಗುಡುಗಿದ್ದಾರೆ.

ತಿರುವನಂತಪುರಂದ ಸಿ ಸಾಜಿತ್ ಹಾಗೂ ಇತರ ಐವರು ದೇವಸ್ತಾನ ಪಾವಿತ್ರ್ಯತೆ ಕೆಡಿಸಿರುವ ಕುರಿತು ಹೈಕೋರ್ಟ್ನಲ್ಲಿ ದೂರು ಸಲ್ಲಿಸಿದ್ದಾರೆ. ಹಂಚುತ್ತಿರುವ ಫೋಟೋಗಳು, ದೇವಸ್ಥಾನದ ಕಚೇರಿ ಒಳಗೆ ಚಿಕಿನ್ ಬಿರಿಯಾನಿ ಇಟ್ಟಿರುವ ಬಾಕ್ಸ್ ಫೋಟೋಗಳನ್ನು ಹೈಕೋರ್ಟ್ಗೆ ಸಲ್ಲಿಸಲಾಗಿದೆ.
ದೇವಸ್ಥಾನದ ಕೆಲ ಸಮಿತಿಯಲ್ಲಿರುವ ತಾತ್ಕಾಲಿಕ ಸಿಬ್ಬಂದಿಗಳಿಗೆ ಮಧ್ಯಾಹ್ನದ ವೇಳೆ ಬಿರಿಯಾನಿ ಹಂಚಿದ್ದಾರೆ ಎಂದು ದೇವಸ್ಥಾನ ಸಮಿತಿ ಹೇಳಿದೆ. ನಿಯಮ ವಿರುದ್ಧವಾಗಿ ನಡೆದುಕೊಂಡವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಕೆಲವರನ್ನು ಅಮಾನತು ಮಾಡಲಾಗಿದೆ ಎಂದು ಸಮಿತಿ ತಿಳಿಸಿದೆ.