ಬೆಳಗಾವಿ : ನನ್ನನ್ನು ಯಾರು ಊಟಕ್ಕೆ ಕರೆದಿರಲಿಲ್ಲ, ರೂಮ್ನಲ್ಲಿ ಎರಡು ತರಿಸಿಕೊಂಡು ತಿಂದೆ ಅಷ್ಟೇ ಎಂದು ಶಾಸಕ ಶಿವಲಿಂಗೇಗೌಡ ಹೇಳಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಶಿವಲಿಂಗೇಗೌಡ, ಡಿನ್ನರ್ ಮೀಟಿಂಗ್ ಸಂಬಂಧಪಟ್ಟಂತೆ, ನನ್ನನ್ನು ಯಾರು ಊಟಕ್ಕೆ ಕರೆದಿರಲಿಲ್ಲ ಸಿದ್ದರಾಮಯ್ಯ ಜೊತೆಗೆ ಊಟ ಮಾಡಿಲ್ಲ ಹಾಗೇ ಡಿಕೆ ಶಿವಕುಮಾರ್ ಜೊತೆಗೂ ಊಟ ಮಾಡಿಲ್ಲ, ರೂಮ್ ನಲ್ಲಿ ಎರಡು ತರಿಸಿಕೊಂಡು ತಿಂದೆ ಅಷ್ಟೇ, ನಮ್ಮಲ್ಲಿ ಯಾವುದೇ ಬಣಗಳು ಇಲ್ಲ ಎಂದಿದ್ದಾರೆ.
ಅಧಿವೇಶನ ನಡೆಯುವಾಗ ಶಾಸಕರು ಊಟಕ್ಕೆ ಸೆರುವುದು ಸಹಜ. ಹೈಕಮಾಂಡ್ ತೀರ್ಮಾನದಂತೆ ನಡೆಯುತ್ತೇನೆ ಎಂದಿದ್ದಾರೆ, ಸಿಎಂ ಹಾಗೂ ಡಿಸಿಎಂ. ಆದರೆ ಗೊಂದಲ ಮಾಡ್ತಿರೋದು ನೀವೇ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ : ಹಾಸನ | ಮಹಿಳೆ ಬದುಕಿರುವಾಗಲೇ ಮರಣ ಪ್ರಮಾಣ ಪತ್ರ ಮಾಡಿಸಿ ಆಸ್ತಿ ಕಬಳಿಕೆಗೆ ಯತ್ನ!



















