ಬೆಂಗಳೂರು: ನಿನ್ನೆ ನಡೆದ ಜಾತಿಗಣತಿಯ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಒಮ್ಮತದ ಅಭಿಪ್ರಾಯ ಸಚಿವರುಗಳ ಕಡೆಯಿಂದ ಬಂದಿಲ್ಲ ಎಂಬುವುದು ಬಹಿರಂಗವಾಗಿದೆ.
ಸಿಎಂ ಸಿದ್ಧರಾಮಯ್ಯರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಚಿವರುಗಳ ಮಾತುಗಳು ಪರಿಪೂರ್ಣವಾಗಿರಲಿಲ್ಲ.
ಕೆಲವರು ಸಮುದಾಯದ ಬಗ್ಗೆ ಮಾತನ್ನಾಡಿದರೆ, ಇನ್ನು ಕೆಲವರು ಅಂಕಿ ಅಂಶಗಳ ಬಗ್ಗೆ ದನಿ ಎತ್ತಿದ್ದಾರೆ. ಇನ್ನು ಕೆಲವರು ಈ ವರದಿ ಮಂಡನೆಯಾದರೆ, ಸರ್ಕಾರಕ್ಕೆ ಕಂಟಕ ಎಂಬ ಅಂಶವನ್ನು ಬಿಚ್ಚಿಟ್ಟಿದ್ದಾರೆ. ಒಟ್ಟಾರೆಯಾಗಿ ನಿನ್ನೆ ನಡೆದ ಸಭೆಯಲ್ಲಿ ಎಲ್ಲವೂ ಅಪೂರ್ಣವಾಗಿದ್ದು, ಸಭೆ ಅರ್ಧ ಹಂತದಲ್ಲೇ ಮುಕ್ತಾಯಗೊಂಡಿದೆ.